ಮಂಗಳೂರು: ಚಿನ್ನ ಖರೀದಿ ನೆಪದಲ್ಲಿ ಸರ ಕಳವು; ಪ್ರಕರಣ ದಾಖಲು

Update: 2023-07-01 15:09 GMT

ಮಂಗಳೂರು, ಜು.1:ನಗರದ ಜಿಎಚ್‌ಎಸ್ ರಸ್ತೆಯಲ್ಲಿರುವ ಚಿನ್ನಾಭರಣ ಮಳಿಗೆಗೆ ಚಿನ್ನಾಭರಣ ಖರೀದಿಯ ನೆಪದಲ್ಲಿ ಬಂದ ಜೋಡಿಯೊಂದು ಚಿನ್ನದ ಸರ ಕಳವು ಮಾಡಿರುವ ಘಟನೆ ನಡೆದಿದೆ.

ಶುಕ್ರವಾರ ಸಂಜೆ ಸುಮಾರು 4:45ಕ್ಕೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದ ಜೋಡಿಯೊಂದು ಚಿನ್ನಾಭರಣ ಮಳಿಗೆಗೆ ಬಂದು ಗುಣಮಟ್ಟ, ಹಾಲ್‌ಮಾರ್ಕ್, ಮೌಲ್ಯಗಳ ಬಗ್ಗೆ ವಿಚಾರಿಸಿದರು. ಎರಡು ಆಭರಣಗಳ ಮೌಲ್ಯವನ್ನು ಖಚಿತಪಡಿಸಿಕೊಂಡ ಬಳಿಕ ಎಟಿಎಂನಿಂದ ಹಣ ತರುವುದಾಗಿ ಹೊರಗೆ ಹೋದವರು ತುಂಬಾ ಹೊತ್ತಾದರೂ ವಾಪಸ್ ಬರಲಿಲ್ಲ. ಇದರಿಂದ ಸಂಶಯಗೊಂಡ ಅಂಗಡಿಯವರು ಸ್ಟಾಕ್‌ನ್ನು ಪರಿಶೀಲಿಸಿದಾಗ 13.830 ಗ್ರಾಂ ತೂಕದ ಅಂದಾಜು 74,000 ರೂ. ಮೌಲ್ಯದ ಸರ ಕಳವಾಗಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News