ಮಂಗಳೂರು: ಕಾಂಗ್ರೆಸ್ ನಿಂದ ಕುದ್ಮುಲ್ ರಂಗರಾವ್ ಜಯಂತಿ ಆಚರಣೆ

Update: 2023-07-01 16:09 GMT

ಮಂಗಳೂರು: ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕುದ್ಮುಲ್ ರಂಗರಾವ್ ರವರ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಐವನ್ ಡಿ ಸೋಜ ಕುದ್ಮುಲ್ ರಂಗರಾವ್ ತತ್ವ ಅದು ಕಾಂಗ್ರೆಸ್ ತತ್ವ ಅವರು ನಡೆದು ಬಂದ ದಾರಿ ದೀನ ದಲಿತ, ಬಡ ಹಿಂದುಳಿದ ವರ್ಗದ ಸೇವೆ. ಇದೇ ಕಾರ್ಯದಲ್ಲಿ ಇಂದು ಕಾಂಗ್ರೆಸ್ ಮುಂದುವರಿಯುತ್ತಿದೆ. ಕಾಂಗ್ರೆಸ್ ಗ್ಯಾರೆಂಟಿ ಬಡವರ ಪ್ರಗತಿಯ ಗ್ಯಾರೆಂಟಿಯಾಗಿದೆ ಎಂದರು.

ಬ್ಲಾಕ್ ಅಧ್ಯಕ್ಷ ಪ್ರಕಾಶ್ ಬಿ ಸಾಲ್ಯಾನ್ ಹಾಗೂ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್ ದೇವಾಡಿಗ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲಾ ಗಟ್ಟಿ, ಕಾರ್ಪೊರೇಟರ್ ಕೇಶವ ಮರೊಳಿ, ನಗರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಘುರಾಜ್ ಕದ್ರಿ, ಮುಖಂಡರುಗಳಾದ ಮೋಹನಂಗಯ್ಯ ಸ್ವಾಮಿ,ರಾಜೇಂದ್ರ ಚಿಲಿಂಬಿ, ಪ್ರಕಾಶ್ ಕೋಡಿಕಲ್, ವಸಂತಿ ಮೋಹನಂಗಯ್ಯಸ್ವಾಮಿ, ಮಲ್ಲಿಕಾರ್ಜುನ್, ಟಿ.ಸಿ.ಗಣೇಶ್, ದೇವಿ ಪ್ರಸಾದ್ ಕದ್ರಿ, ವಸಂತಿ ಭಾರತೀನಗರ, ದಿನೇಶ್ ಕೊಡಿಯಲ್ ಬೈಲ್, ಪ್ರಥ್ವಿ ಸಾಲಿಯಾನ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News