ಮಂಗಳೂರು: ಲಯನ್ಸ್ ಕ್ಲಬ್ ಕದ್ರಿಹಿಲ್ಸ್ ಪದಗ್ರಹಣ ಕಾರ್ಯಕ್ರಮ

Update: 2023-07-05 03:42 GMT

ಲಯನ್ಸ್ ಕ್ಲಬ್ ಕದ್ರಿಹಿಲ್ಸ್ ಮಂಗಳೂರುಇದರ ಪದಗ್ರಹಣ ಕಾರ್ಯಕ್ರಮವು ತಾರೀಖು 01/07/2023 ರಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಲಯನ್ ರೊನಾಲ್ಡ್ ಗೋಮ್ಸ್ ಇವರ ಅಧ್ಯಕ್ಷತೆಯಲ್ಲಿ ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು.

2023-24 ರ ಸಾಲಿನ ಅಧ್ಯಕ್ಷರಾಗಿ ಲಯನ್ ವಿನೋದ್ ಪ್ರಭು, ಕಾರ್ಯದರ್ಶಿಯಾಗಿ ಲಯನ್ ವಿದ್ಯಾ ಕಾಮತ್ ಹಾಗೂ ಕೋಶಾಧಿಕಾರಿಯಾಗಿ ಲಯನ್ ಸಂಧ್ಯಾ ಸುಜಿತ್ ಅಧಿಕಾರವನ್ನು ವಹಿಸಿದರು.

ಲಯನ್ಸ್ ಜಿಲ್ಲೆಯಲ್ಲೇ ಸೇವೆಯಲ್ಲಿ ಉತ್ತಮ ಸ್ಥಾನದಲ್ಲಿ ಇದ್ದಂತಹ ಕದ್ರಿ ಹಿಲ್ಸ್ ವತಿಯಿಂದ ಅಂದು ಸುಮಾರು 2 ಲಕ್ಷದಷ್ಟು ಸೇವಾ ಕಾರ್ಯಕ್ರಮಗಳು ನಡೆಯಿತು.

ಅಂದಿನ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷೆ ಲಯನ್ ಸುಮಿತ್ರಾ ಶೆಟ್ಟಿ,ಇವರು ನಿರ್ಗಮನದ ಮಾತುಗಳನ್ನಾಡಿದರು. ತಮ್ಮ ಪ್ರಾಂತ್ಯದ ಅಧ್ಯಕ್ಷರಾದ ಲಯನ್ ಉಮಾ ಹೆಗ್ಡೆ ಹಾಗೂ ಜಿಲ್ಲಾ ಉಪರಾಜ್ಯಪಾಲರಾದ ಲಯನ್ ಬಿ ಎಂ ಭಾರತಿ ಇವರು ಶುಭಾಸಂಶನೆ ಗೈದರು. ವಿದ್ಯಾ ಕಾಮತ್ ಧನ್ಯವಾದ ಸಮರ್ಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News