ಸಾರ್ವಜನಿಕ ಸ್ಥಳದಲ್ಲಿ ಗಲಾಟೆ: ಮೂವರು ವಶಕ್ಕೆ

Update: 2023-07-15 16:48 GMT

ಕೋಟ, ಜು.15: ಕೋಟ ಪೇಟೆಯ ಲತಾ ಹೋಟೇಲ್ ಎದುರು ಜು.14 ರಂದು ಸಂಜೆ ವೇಳೆ ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗವಾಗುವಂತೆ ಪರಸ್ಪರ ಗಲಾಟೆ ಮಾಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಹೊಸಂಗಡಿ ಗ್ರಾಮದ ಕೊಣಬೈಲುವಿನ ಸುಕುಮಾರ್ ಶೆಟ್ಟಿ(38), ಬಿಲ್ಲಾಡಿ ಬನ್ನೇರಳಕಟ್ಟೆಯ ವಿನಯ(32) ಹಾಗೂ ಗಂಗೊಳ್ಳಿಯ ಅಜಿತ್ ಕುಮಾರ್ (33) ಎಂಬವರು ಶಾಂತಿ ಭಂಗವಾಗುವಂತೆ ಅವಾಚ್ಯ ಶಬ್ದಗಳಿಂದ ಬೈದಾಡಿ ಕೊಂಡು ಪರಸ್ಪರ ದೂಡಾಡಿಕೊಳ್ಳುತ್ತಿದ್ದರೆನ್ನಲಾಗಿದೆ. ಪೊಲೀಸರು ಕೂಡಲೇ ಇವರನ್ನು ಹಾಗೂ ಅಲ್ಲೇ ಇದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News