SKSBV ಉಪ್ಪಿನಂಗಡಿ ರೇಂಜ್: ನೂತನ ಪದಾಧಿಕಾರಿಗಳ ಆಯ್ಕೆ

Update: 2023-06-25 17:46 GMT

ಉಪ್ಪಿನಂಗಡಿ: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾ ಅಧೀನದಲ್ಲಿರುವ ಮದ್ರಸ ವಿದ್ಯಾರ್ಥಿಗಳ ಒಕ್ಕೂಟ SKSBV ಉಪ್ಪಿನಂಗಡಿ ರೇಂಜ್ ಗೆ  ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ರೇಂಜ್ ಅಧ್ಯಕ್ಷರಾದ ಕೆ.ಎಚ್. ಅಶ್ರಫ್ ಹನೀಫಿ ಕರಾಯ ಅವರ ಅಧ್ಯಕ್ಷತೆಯಲ್ಲಿ SKSBV ಕನ್ವೀನರ್ ಅಬ್ದುಲ್ ಸಮದ್ ಬಾಖವಿ ಯವರ ಸ್ವಾಗತದೊಂದಿಗೆ SKSBV ಚೇರ್ಮನ್ ಅಬ್ದುಲ್ ಹಮೀದ್ ಹನೀಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ರೇಂಜ್ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಅಸ್ಲಮಿ , ಸಿದ್ದೀಕ್ ರಹ್ಮಾನಿ ಕರ್ವೆಲ್ , ಯಹ್ಯ ಫೈಝಿ ಅಡೆಕ್ಕಲ್ ವಿಧ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿಕೊಟ್ಟರು.  ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರತಿನಿಧಿಗಳು, ಅಧ್ಯಾಪಕರೂ ಹಾಜರಿದ್ದರು.

2023-24 ಸಾಲಿನ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಝೀಶಾನ್ ಅಲಿ ಕುದ್ಲೂರು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಾಝಿಕ್ ಬಂಗೇರ ಕಟ್ಟೆ, ಕೋಶಾಧಿಕಾರಿಯಾಗಿ ಸಫೀರ್ ಅಹ್ಮದ್ ಕರಾಯ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಆಸಿಫ್ ಮುಹಾದ್ ಕೊಕ್ಕಡ, ಇಸ್ಮಾಯಿಲ್ ಮುಫ್ಶಿರ್ ಹಳೆಗೇಟು ಮುಹಮ್ಮದ್ ಸೈಫುದ್ದೀನ್ ಆದರ್ಶನಗರ ಜೊತೆ ಕಾರ್ಯದರ್ಶಿಗಳಾಗಿ ಅಬೂ ತ್ವಾಹಿರ್ ಮಾಪಲ್, ಯೂಸುಫ್ ಶಾಝಿಲ್ ನಿನ್ನಿಕಲ್ಲು, ಆದಿಲ್ ಅಹ್ಮದ್ ಅಡೆಕ್ಕಲ್, ಸಂಘಟನ ಕಾರ್ಯದರ್ಶಿ ಮುಹಮ್ಮದ್ ಶಿಯಾನ್ ಕೊಚ್ಚಿಲ, ಖಿದ್ಮ ಕನ್ವೀನರ್ ಮುಹಮ್ಮದ್ ಸಿಯಾಂ ಉಪ್ಪಿನಂಗಡಿ, ಅದಬ್ ಕನ್ವೀನರ್ ಮುಹಮ್ಮದ್ ಬಾಹಿಷ್ ಬೋಳದಬೈಲು, ಅಲಿಫ್ ಕನ್ವೀನರ್ ಮುಹಮ್ಮದ್ ಸಲ್ಮಾನ್ ಕರಾಯ ಟೆಕ್ ಅಡ್ಮಿನ್ ಕನ್ವೀನರ್ ಮುಹಮ್ಮದ್ ತಝೀಮ್ ಇಖ್ಬಾಲ್ ಕುದ್ಲೂರು, ಜಿಲ್ಲಾ ಕೌನ್ಸಿಲರ್ ಗಳಾಗಿ ಸೈಯ್ಯದ್ ಮಿಸ್ಹಬ್ ತಂಙಳ್ ಉಪ್ಪಿನಂಗಡಿ, ಮುಹಮ್ಮದ್ ತಶ್ರೀಫ್ ಹಿರೇಬಂಡಾಡಿ, ಕಾರ್ಯಕಾರಿ ಸಮಿತಿ ಸದಸ್ಯರುಗಳು ತಮೀಮ್ ಮಠ,ಅಝ್ಮಲ್ಅರಫಾತ್ ಕರ್ವೆಲ್, ಅನಸ್ ಕೊಕ್ಕಡ, ಬಾರಿಝ್ ಅಂಡೆತ್ತಡ್ಕ, ಮುಹಮ್ಮದ್ ಫಾಝ್ ಕಡವಿನಬಾಗಿಲು, ಬಿಲಾಲ್ ಬೆದ್ರೋಡಿ, ಹಾಶಿರ್ ಕೋಲ್ಪೆ, ಇಝಾಮ್ ಪವಿತ್ರನಗರ, ರಾಹಿಫ್ ಮಲ್ಲಿಗೆಮಜಲು ಆಯ್ಕೆಯಾದರು. ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್ ಫೈಝಿ ವಂದಿಸಿದರು,

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News