ಅಶ್ರಫ್ ಕಲ್ಲಾಡಿಯವರ ನಿಧನಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯ ಸಂತಾಪ

Update: 2023-07-05 04:20 GMT

ಮಂಗಳೂರು, ಜು. 4: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯ, ಸದಸ್ಯರೂ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮಾತ್ರವಲ್ಲದೆ ಸಮಾಜ ಸೇವಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದ, ವೆಲ್ಫೇರ್ ಪಕ್ಷದ ಸ್ಥಳೀಯ ಯುವ ನಾಯಕ ಅಶ್ರಫ್ ಕಲ್ಲಾಡಿಯವರು ಅಕಾಲಿಕ ಮರಣ ಹೊಂದಿರುವುದು ನಮ್ಮ ಪಕ್ಷಕ್ಕೆ ಮಾತ್ರವಲ್ಲದೆ ಒಟ್ಟು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವೆಲ್ಫೇರ್ ಪಕ್ಷದ ದ.ಕ. ಜಿಲ್ಲಾ ಸಮಿತಿಯು ತನ್ನ ಸಂತಾಪ ವ್ಯಕ್ತಪಡಿಸಿದೆ.

ಈ ಬಗ್ಗೆ ವೆಲ್ಫೇರ್ ಪಕ್ಷದ ಜಿಲ್ಲಾಧ್ಯಕ್ಷರಾದ ಅಡ್ವೊಕೇಟ್ ಸರ್ಫರಾಝ್ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಮೃತರು ಸದಾ ಸಮಾಜ ಸೇವಾರಂಗದಲ್ಲಿ ಸಕ್ರಿಯರಾಗಿದ್ದು, ಅವರಿಗೆ ತೀರ್ಥಹಳ್ಳಿ ಬಳಿಯಲ್ಲಿ ಅಪಘಾತ ಸಂಭವಿಸಿರುವುದು ಕೂಡಾ, ರೋಗಿಯೊಬ್ಬರನ್ನು ಶಿವಮೊಗ್ಗದಿಂದ, ಮಂಗಳೂರಿಗೆ ಕರೆತರುವ ಸಂದರ್ಭದಲ್ಲಾಗಿತ್ತು, ಸೃಷ್ಟಿಕರ್ತನು, ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು ಅವರ ಕುಟುಂಬದವರಿಗೆ ಸಹನೆಯನ್ನು ದಯಪಾಲಿಸಲಿ ಎಂದು ಮೃತರ ಕುಟುಂಬಕ್ಕೆ ಸಾಂತ್ವನವನ್ನು ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News