ಸಿಪಿಎಂ ಕಟ್‌ಬೇಲ್ತೂರು ಕಟ್ಟಡ ಕಾರ್ಮಿಕರ ಶಾಖೆ ಸಮ್ಮೇಳನ

Update: 2024-09-29 14:30 GMT

ಕುಂದಾಪುರ: ಸಿಪಿಎಂ ರಾಷ್ಟ್ರೀಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ತಳಮಟ್ಟದ ಶಾಖೆಗಳು ನಡೆಸುತ್ತಿರುವ ಸಮ್ಮೇಳನದ ಭಾಗವಾಗಿ ಬೈಂದೂರು ವಲಯ ಸಮಿತಿ ಅಡಿಯಲ್ಲಿರುವ ಕಟ್‌ಬೇಲ್ತೂರು ಕಟ್ಟಡ ಕಾರ್ಮಿಕರ ಶಾಖಾ ಸಮ್ಮೇಳನ ಇಂದು ಕಟ್‌ಬೇಲ್ತೂರು ಗ್ರಾಮದಲ್ಲಿ ನಡೆಯಿತು.

ಸಮ್ಮೇಳನದ ಧ್ವಜಾರೋಹಣವನ್ನು ಗೋಪಾಲ ಆಚಾರ್ಯ ನೆರವೇರಿಸಿದರು. ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಬೈಂದೂರು ವಲಯ ಸಮಿತಿ ಸದಸ್ಯ ಸಂತೋಷ್ ಹೆಮ್ಮಾಡಿ ಮಾತನಾಡಿದರು.

ಮೂರು ವರ್ಷಗಳ ವರದಿ ಕಾರ್ಯದರ್ಶಿ ಶಂಕರ ಆಚಾರ್ ಮಂಡಿಸಿದರು. ವರದಿ ಮೇಲೆ ಚರ್ಚೆ ನಡೆಸಿ ಅಂಗೀಕಾರ ಮಾಡಲಾಯಿತು. ಕಟ್‌ಬೇಲ್ತೂರು ಶೇಡಿಕಟ್ಟೆ ರೈಲು ಸೇತುವೆ ಅಗಲೀಕರಣ ಮಾಡಿ ಅಪಘಾತ ತಪ್ಪಿಸಲು ಆಗ್ರಹಿಸಿ, ಕಟ್‌ಬೇಲ್ತೂರು ಗ್ರಾಮಕ್ಕೆ ರುದ್ರಭೂಮಿಗೆ ಆಗ್ರಹಿಸಿ ಸಮ್ಮೇಳನ ನಿರ್ಣಯ ಕೈಗೊಂಡು ಹೋರಾಟ ನಡೆಸಲು ತೀರ್ಮಾನಿಸಿತು.

ನೂತನ ಕಾರ್ಯದರ್ಶಿಯಾಗಿ ರತ್ನಾಕರ ಆಚಾರ್ಯರನ್ನು ಸಮ್ಮೇಳನ ಆಯ್ಕೆ ಮಾಡಲಾಯಿತು. ವಲಯ ಸಮಿತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಪಕ್ಷದ ಸದಸ್ಯ ರಮೇಶ ಗಾಣಿಗ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News