ತಾಯಿಯ ಪಿಂಡ ಬಿಡಲು ಹೋದ ಮಗ ಕೆರೆಗೆ ಬಿದ್ದು ಮೃತ್ಯು

Update: 2023-07-19 16:04 GMT

ಕೋಟ, ಜು.19: ತಾಯಿಯ ಪಿಂಡವನ್ನು ಕೆರೆಗೆ ಹಾಕಲು ಹೋದ ಮಗ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಜು.18ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ಗಣೇಶ್ ಅಧಿಕಾರಿ(76) ಎಂದು ಗುರುತಿಸಲಾಗಿದೆ. ಇವರು ತನ್ನ ತಾಯಿಯ ಶ್ರಾದ್ದಾ ಕಾರ್ಯಕ್ರಮ ಮುಗಿಸಿ, ಪಿಂಡ ಬಿಡಲು ಮನೆ ಬಳಿಯ ಕೆರೆಗೆ ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News