ಮಂಗಳೂರು: ಕಾರಿನ ಬಾನೆಟ್ನಲ್ಲಿ ಹೆಬ್ಬಾವು ಪತ್ತೆ
Update: 2023-08-20 16:09 GMT
ಮಂಗಳೂರು, ಆ.20: ಚಲಿಸುತ್ತಿದ್ದ ಕಾರಿನ ಬಾನೆಟ್ನಲ್ಲಿ ಹೆಬ್ಬಾವೊಂದು ಪತ್ತೆಯಾದ ಘಟನೆ ರವಿವಾರ ನಗರದ ಮಣ್ಣಗುಡ್ಡೆ ವಾಲಿಬಾಲ್ ಮೈದಾನ ಬಳಿ ನಡೆದಿದೆ.
ವ್ಯಕ್ತಿಯೊಬ್ಬರು ಕುದ್ರೋಳಿ ಸಮೀಪದ ಕಂಬಳದ ಫ್ಲ್ಯಾಟ್ಗೆ ಬಂದಿದ್ದು, ಅಲ್ಲಿಂದ ವಾಪಸ್ ತನ್ನ ಮನೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಮಣ್ಣಗುಡ್ಡೆ ಬಳಿ ಇಂಜಿನ್ ಬಂದ್ ಬಿದ್ದಿತ್ತು ಎನ್ನಲಾಗಿದೆ. ಎಷ್ಟೇ ಪ್ರಯತ್ನಿಸಿದರೂ ಕಾರು ಮುಂದೆ ಚಲಿಸಲಿಲ್ಲ. ಹಾಗಾಗಿ ಕಾರಿನ ಮಾಲಕರು ಮೆಕ್ಯಾನಿಕ್ನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆತ ಕಾರಿನ ಬಾನೆಟ್ ತೆರೆದು ನೋಡಿದಾಗ ಅದರೊಳಗೆ ಹೆಬ್ಬಾವು ಮುದುಡಿ ಕುಳಿತಿರುವುದು ಕಂಡು ಬಂದಿದೆ. ಬಳಿಕ ಸ್ಥಳೀಯರ ಜತೆ ಸೇರಿ ಹೆಬ್ಬಾವನ್ನು ಹೊರ ತೆಗೆಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.