ಮಂಜನಾಡಿ ಕೇಂದ್ರ ಜುಮಾ ಮಸೀದಿಯಿಂದ ಮೀಲಾದ್ ರ್‍ಯಾಲಿ

Update: 2024-09-16 09:51 GMT

ದೇರಳಕಟ್ಟೆ: ಪ್ರವಾದಿ ಮುಹಮ್ಮದ್ ಮುಸ್ತಫಾ(ಸ)ರ ಜನ್ಮದಿನದ ಪ್ರಯುಕ್ತ ಮಂಜನಾಡಿ ಕೇಂದ್ರ ಜುಮಾ ಮಸೀದಿಯ ವತಿಯಿಂದ ಹಮ್ಮಿಕೊಂಡಿದ್ದ ಮೀಲಾದ್ ರ್‍ಯಾಲಿಗೆ ಮಸೀದಿಯ ಮುದರ್ರಿಸ್ ಅಹ್ಮದ್ ಬಾಖವಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಮಾಅತ್ ಸದಸ್ಯರಾದ ಟಿ.ಕುಂಞಿ, ಹಮೀದ್ ಆರಂಗಡಿ, ಅಹ್ಮದ್ ಕುಂಞಿ, ಕೆ.ಎಂ.ಕೆ.ಮಂಜನಾಡಿ, ಸಹಾಯಕ ಮುದರ್ರಿಸ್ ಮಸೂದ್ ಸಖಾಫಿ, ಬುಖಾರಿ ಯಂಗ್ ಮೆನ್ಸ್ ಅಸೋಸಿಯೇಶನ್ ಸದಸ್ಯರು, ಬಂಡಶಾಲೆ ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News