ಕುದ್ರೋಳಿ ದಸರಾ ಮೆರವಣಿಗೆ: ವಾಹನ ಸಂಚಾರ ಮಾರ್ಗ ಬದಲಾವಣೆ

Update: 2024-10-05 12:47 GMT

ಮಂಗಳೂರು: ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಅ.13ರಂದು ಸಂಜೆ 4ಕ್ಕೆ ನವದುರ್ಗೆಯರು, ಶಾರದೆ, ಗಣೇಶ ವಿಗ್ರಹ, ವಿವಿಧ ಟ್ಯಾಬ್‌ಗಳ ಶೋಭಾಯಾತ್ರೆಯು ನಡೆಯಲಿದೆ.

ಹಾಗಾಗಿ ಅ.13ರ ಮಧ್ಯಾಹ್ನ 2ರಿಂದ ಅ.14ರಂದು ಬೆಳಗ್ಗೆ 6ರವರೆಗೆ ಸಾರ್ವಜನಿಕರ ಸುರಕ್ಷತೆ ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಣ್ಣಗುಡ್ಡೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ-ಲಾಲ್‌ಬಾಗ್-ಪಿವಿಎಸ್-ನವ ಭಾರತ್ ವೃತ್ತ- ಕೆಎಸ್‌ಆರ್ ರಸ್ತೆ-ಕೆ.ಬಿ. ಕಟ್ಟೆ ವೃತ್ತ-ಓಂ ಮಹಲ್ ಜಂಕ್ಷನ್-ಗಣಪತಿ ಹೈಸ್ಕೂಲ್ ರಸ್ತೆ-ಮೋಹಿನಿ ವಿಲಾಸ, ರಥಬೀದಿ-ಲೋವರ್ ಕಾರ್‌ಸ್ಟ್ರೀೀಟ್-ನ್ಯೂಚಿತ್ರಾ-ಅಳಕೆ-ಕುದ್ರೋಳಿ ದೇವಸ್ಥಾನದವರೆಗಿನ ರಸ್ತೆ ಬದಿ ವಾಹನ ಪಾಕಿರ್ಂಗ್ ಹಾಗೂ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡುಗೊಳಿಸಿ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News