ಚಿಕ್ಕಮಗಳೂರು | ಬುರ್ಖಾ ಧರಿಸಿ ಭಿಕ್ಷೆ ಬೇಡುತ್ತಿದ್ದ ಯುವಕ : ಸಾರ್ವಜನಿಕರಿಂದ ಥಳಿತ

Update: 2024-08-13 16:28 GMT

ಚಿಕ್ಕಮಗಳೂರು: ಯುವಕನೊಬ್ಬ ಬುರ್ಖಾ ಧರಿಸಿಕೊಂಡು ನಗರದಲ್ಲಿ ಭಿಕ್ಷೆ ಬೇಡುತ್ತಿದ್ದ ವೇಳೆ ಅನುಮಾನಗೊಂಡ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದಲ್ಲಿ ಮಂಗಳವಾರ ವರದಿಯಾಗಿದೆ.

ಬಾಳೆಹೊನ್ನೂರು ಮೂಲದ ಯುವಕ ಹರೀಶ್ ಎಂಬಾತ ಕೈ, ಕಾಲಿನ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಿಕೊಂಡು,  ಬುರ್ಖಾ ಧರಿಸಿ ನಗರದ ಮಲ್ಲಂದೂರು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ. ಆತ ನಡೆಯುತ್ತಿದ್ದ ಶೈಲಿ ಹಾಗೂ ನಡವಳಿಕೆಯಿಂದ ಅನುಮಾನಗೊಂಡ ಸಾರ್ವಜನಿಕರು ತಡೆದು ಪರಿಶೀಲಿಸಿದಾಗ ವಿಷಯ ತಿಳಿದಿದೆ. ಇದಲ್ಲದೆ, ಆತ ಚಾಕು ಕೂಡ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ಯುವಕನ ಮಾತಿನಿಂದ ಅನುಮಾನಗೊಂಡ ಸಾರ್ವಜನಿಕರು ಆತನಿಗೆ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಿಕ್ಷೆ ಬೇಡುವ ಉದ್ದೇಶದಿಂದ ಆತ ಬುರ್ಖಾ ಧರಿಸಿದ್ದ ಎನ್ನಲಾಗಿದ್ದು, ಆತ ಚಾಕು ಇಟ್ಟುಕೊಂಡಿದ್ದು ಏಕೆ ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬರಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News