ಮೃತ ಮುತಾಮಲ್ ವೀರಸ್ವಾಮಿ ಕುಟುಂಬಕ್ಕೆ ಮಂಗಳೂರು ಸೀ ಫುಡ್ ಬಯರ್ಸ್ ಅಸೋಸಿಯೇಷನ್ ವತಿಯಿಂದ ಧನ ಸಹಾಯ
Update: 2023-08-24 13:42 GMT
ಮಂಗಳೂರು : ತಮಿಳುನಾಡು ಸೇಲಂ ನಿವಾಸಿ, M.M.P ಕಂಪನಿಯ ಕಾರ್ಮಿಕ ಮುತಾಮಲ್ ವೀರಸ್ವಾಮಿ ಅವರು ಆಕಸ್ಮಿಕ ಮರಣ ಹೊಂದಿದ ಕಾರಣ ಅವರ ಕುಟುಂಬಕ್ಕೆ ಮಂಗಳೂರು ಸೀ ಫುಡ್ ಬಯರ್ಸ್ ಅಸೋಸಿಯೇಷನ್ ವತಿಯಿಂದ ಒಂದು ಲಕ್ಷ ರೂ. ಅನ್ನು ಅಧ್ಯಕ್ಷರಾದ ಎಸ್ ಎಮ್ ಇಬ್ರಾಹಿಂ ನೀಡಿದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್ ಎಮ್ ಭಾಷಾ, ಕಾರ್ಯದರ್ಶಿ ಬಿ.ಹುಸೈನ್, ಖಜಾಂಜಿ ಮುಸ್ತಾಕ್ ಅಹ್ಮದ್, ಸದಸ್ಯರಾದ ಇಬ್ರಾಹಿಂ ಉಳ್ಳಾಲ ಉಪಸ್ಥಿತರಿದ್ದರು.
ಈ ಸಂಸ್ಥೆಯು ಇದರ ಸದಸ್ಯ ಕಂಪನಿಯ ಕಾರ್ಮಿಕರು ಮರಣ ಹೊಂದಿದರೆ ಒಂದು ಲಕ್ಷ ರೂ., ಕಾರ್ಮಿಕರು ಅನಾರೋಗ್ಯಕ್ಕೆ ಈಡಾದಲ್ಲಿ ಆಸ್ಪತ್ರೆಯ ಖರ್ಚಿನ ಅರ್ಧ ಸೀ ಫುಡ್ ಬಯರ್ಸ್ ಅಸೋಸಿಯೇಷನ್ ಭರಿಸುವುದಾಗಿ ಪ್ರಕಟನೆ ತಿಳಿಸಿದೆ.