ಲಂಡನ್: ಬಸವಣ್ಣನ ಪುತ್ಥಳಿಗೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ವಿ. ಪರಿಷತ್ ಅಧ್ಯಕ್ಷ ಹೊರಟ್ಟಿ ನಮನ

Update: 2023-10-16 04:38 GMT

ಲಂಡನ್: ಇಲ್ಲಿನ ಲ್ಯಾಂಬೆತ್ ನಲ್ಲಿರುವ ಬಸವಣ್ಣರ ಪುತ್ಥಳಿಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ರವಿವಾರ ಗೌರವ ಸಲ್ಲಿಸಿದರು.

ದಿ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ದಿ ಬಸವ ಸಮಿತಿ ಆಫ್ ಯುನೈಟೆಡೆ ಕಿಂಗ್ಡಮ್ ಇದರ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಅಧ್ಯಕ್ಷ ಡಾ.ನೀರಜ್ ಪಾಟೀಲ್, ದಿ ಬಸವ ಸಮಿತಿ ಆಫ್ ಯುನೈಟೆಡೆ ಕಿಂಗ್ಡಮ್ ಇದರ ಕಾರ್ಯಕಾರಿಯ ಸಮಿತಿಯ ಅಭಿಜಿತ್ ಸಾಲಿಮತ್, ರಂಗನಾಥ್ ಮಿರ್ಜಿ, ಕಾಂತಿ ಪಟೇಲ್, ರಾಜೀವ್ ಮೆಟ್ರಿ ಮತ್ತಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News