ಹೆಬ್ರಿ: ನೀರಿನ ಹೊಂಡಕ್ಕೆ ಬಿದ್ದು ಮಗು ಮೃತ್ಯು

Update: 2023-08-02 10:01 GMT

ಹೆಬ್ರಿ: ನೀರಿನ ಹೊಂಡಕ್ಕೆ ಬಿದ್ದು ಮಗುವೊಂದು ಮೃತಪಟ್ಟ ಘಟನೆ  ನಾಲ್ಕೂರು ಗ್ರಾಮದ ಕಜ್ಕೆ ದೊಡ್ಡ ಮನೆ ಎಂಬಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಕಜ್ಕೆ ಅರಮನೆ ಜೆಡ್ಡು ನಿವಾಸಿ ಸಂತೋಷ್ ಬೋವಿ ಎಂಬವರ ಮಗಳು ಕೃತಿಕಾ(3) ಎಂದು ಗುರುತಿಸಲಾಗಿದೆ  ತನ್ನ ಅಜ್ಜಿ ಮಂಜುಳಾ ಎಂಬವರೊಂದಿಗೆ ನಡೆದು ಕೊಂದು ಹೋಗುತ್ತಿದ್ದ ಮಗು ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಹೊಂಡದಲ್ಲಿ ಬಿದ್ದು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News