ಅಂದರ್‌ಬಾಹರ್: ಐವರ ಬಂಧನ

Update: 2024-08-18 12:02 GMT

ಶಂಕರನಾರಾಯಣ, ಆ.18: ಅಂಪಾರು ನಾಗಶ್ರೀ ಬಾರ ಕಡೆಗೆ ಹೋಗುವ ರಸ್ತೆಯ ಸರಕಾರಿ ಹಾಡಿಯಲ್ಲಿ ಆ.15ರಂದು ಸಂಜೆ ವೇಳೆ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಐವರನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಅಂಪಾರು ಗ್ರಾಮದ ವಿಜಯಕರ(48), ರಮೇಶ(48), ಸಂತೋಷ(45), ಉಮೇಶ(39), ಶಂಕರನಾರಾಯಣ ಗ್ರಾಮದ ಮಂಜುನಾಥ(48) ಬಂಧಿತ ಆರೋಪಿಗಳು. ಇವರಿಂದ 2720ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News