ಕುಮಟ-ಮುರ್ಡೇಶ್ವರ ನಡುವೆ ನಿರ್ವಹಣಾ ಕಾರ್ಯ; ರೈಲುಗಳ ಸಂಚಾರದಲ್ಲಿ ವ್ಯತ್ಯಯ

Update: 2023-09-25 13:45 GMT

ಸಾಂದರ್ಭಿಕ ಚಿತ್ರ

ಉಡುಪಿ:  ಸೆ.28ರ ಅಪರಾಹ್ನ 12:00ರಿಂದ 3:00ಗಂಟೆಯ ನಡುವೆ ಕೊಂಕಣ ರೈಲ್ವೆ ಮಾರ್ಗದ ಕುಮಟ ಮತ್ತು ಮುರುಡೇಶ್ವರ ನಡುವೆ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.

ಇದರಿಂದ ಸೆ.27ರಂದು ಉದ್ನಾದಿಂದ ಪ್ರಯಾಣ ಪ್ರಾರಂಭಿಸುವ ಉದ್ನಾ- ಮಂಗಳೂರು ಜಂಕ್ಷನ್ ವಿಶೇಷ ರೈಲಿನ ಸಂಚಾರ 28ರಂದು ಮಡಗಾಂವ್ ಜಂಕ್ಷನ್ ಹಾಗೂ ಕಾರವಾರ ನಿಲ್ದಾಣಗಳ ನಡುವೆ 2 ಗಂಟೆ ವಿಳಂಬಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News