ಲೋಕಸಭಾ ಚುನಾವಣೆ ಸಂಬಂಧ ಉಡುಪಿ ಡಿಸಿಯಿಂದ ಸಭೆ

Update: 2023-11-08 16:18 GMT

ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಜಾಹಿರಾತು ಪ್ರಚಾರ ಮಾಡಲು ಜಿಲ್ಲಾ ಮಟ್ಟದ ದರ ನಿಗದಿಪಡಿಸುವ ಕುರಿತು ಸಭೆಯು ಇಂದು ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಕಾಂಗ್ರೆಸ್‌ನ ಹಬೀಬ್ ಅಲಿ ಹಾಗೂ ಪ್ರದೀಪ, ಬಿಜೆಪಿಯ ಚಂದ್ರಶೇಖರ ಪ್ರಭು, ಜೆಡಿಎಸ್‌ನ ಜಯರಾಮ ಆಚಾರ್ಯ, ಸಿಪಿಐಎಂನ ಮನೋಹರ್, ಆಮ್ ಆದ್ಮಿ ಪಕ್ಷದ ಸುರೇಶ್ ಜಿ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News