ಬಾವಿಗೆ ಬಿದ್ದು ಮಹಿಳೆ ಮೃತ್ಯು
Update: 2024-07-06 15:56 GMT
ಶಂಕರನಾರಾಯಣ, ಜು.6: ಅಕಸ್ಮಿಕವಾಗಿ ಬಾವಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಳ್ಳೂರು-74 ಗ್ರಾಮ ಕುಂಬ್ರೊಜೆಡ್ಡು ಎಂಬಲ್ಲಿ ಜು.5ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಕುಂಬ್ರೊಜೆಡ್ಡು ನಿವಾಸಿ ಕಲ್ಪನಾ(48) ಎಂದು ಗುರುತಿಸಲಾಗಿದೆ. ಇವರು ಮನೆಯ ತೋಟದಲ್ಲಿ ಆವರಣವಿಲ್ಲದ ನಿರ್ಮಾಣ ಹಂತದಲ್ಲಿನ ಬಾವಿಗೆ ಸಮೀಪದ ದಾರಿಯಲ್ಲಿ ಹೋಗುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ಬಾವಿಯೊಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.