ಉಚಿತ ಯಕ್ಷಗಾನ ತರಬೇತಿ ಶಿಬಿರ

Update: 2024-07-06 16:10 GMT

ಉಡುಪಿ, ಜು.6: ಉಡುಪಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ ವತಿಯಿಂದ ಅಂಬಲಪಾಡಿಯ ಕಂಬ್ಳ ಕಟ್ಟದಲ್ಲಿರುವ ‘ಶ್ರೀ ಜನಾರ್ದನ ಮಂಟಪ’ದಲ್ಲಿ ಜು.14ರ ರವಿವಾರ ಬೆಳಗ್ಗೆ 9:30ರಿಂದ ಮಕ್ಕಳಿಗೆ ಮತ್ತು ಹಿರಿಯರಿಗೆ ಉಚಿತವಾಗಿ ‘ಯಕ್ಷಗಾನ ನಾಟ್ಯ ತರಬೇತಿ’ ಯನ್ನು ನೀಡಲಾಗುವುದು. ಆಸಕ್ತರು ಅಧ್ಯಕ್ಷ ಕೆ.ಅಜಿತ್‌ಕುಮಾರ್ (9845309836) ಅಥವಾ ಕಾರ್ಯದರ್ಶಿ ಪ್ರಕಾಶ್ ಹೆಬ್ಬಾರ್ (9448300929)ಇವರನ್ನು ಸಂಪರ್ಕಿಸುವಂತೆ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News