ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಅಬ್ದುಲ್ಲಾ ಪರ್ಕಳ ಅವರಿಗೆ ಸನ್ಮಾನ

Update: 2023-11-18 09:38 GMT

ಉಡುಪಿ, ನ.18: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಹಾಜಿ ಅಬ್ದುಲ್ಲಾ ಪರ್ಕಳ ಹಾಗೂ ಸಮಾಜ ಸೇವಕ ಡಾ.ಮೊಹಮ್ಮದ್ ರಫೀಕ್ ಅವರಿಗೆ ಸನ್ಮಾನ ಸಮಾರಂಭ ಉಡುಪಿಯ ಮಣಿಪಾಲ್ ಇನ್ ಹೋಟೆಲ್‌ನಲ್ಲಿ ಜರಗಿತು.

ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷ ಬೆಳ್ವೆ ಮುಸ್ತಾಕ್ ಅಹ್ಮದ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮೌಲಾನ ಝಮಿರ್ ಅಹ್ಮದ್ ರಷಾದಿ, ಉದ್ಯಮಿ ಬಿ.ಎಸ್.ಎಫ್.ರಫೀಕ್ ಗಂಗೊಳ್ಳಿ, ಜಿಲ್ಲಾ ಉಪಾಧ್ಯಕ್ಷ ಶೈಖ್ ವಾಹಿದ್, ಕುಂದಾಪುರ ಅಧ್ಯಕ್ಷ ದಸ್ತಗೀರ್ ಕಂಡ್ಲೂರ್, ಯುವ ಘಟಕದ ಅಧ್ಯಕ್ಷ ಝಹಿರ್ ಅಹ್ಮದ್ ನಾಕುದ ಗಂಗೊಳ್ಳಿ, ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ನಕ್ವ ಯಾಹ್ಯಾ ಉಡುಪಿ, ರಶೀದ್ ಯು.ಎ., ಉಸ್ತಾದ್ ಸಾದಿಕ್ ಹೂಡೆ, ಜಿಲ್ಲಾ ಉಪಾಧ್ಯಕ್ಷ ಶಾಕಿರ್ ಹಾವಂಜೆ, ಅಬು ಮುಹಮ್ಮದ್ ಕುಂದಾಪುರ, ಸಯ್ಯದ್ ಅಜ್ಮಲ್ ಶಿರೂರ್, ನಜೀರ್ ಶಾ ಅಜೆಕಾರ್, ಸಂಘಟನಾ ಕಾರ್ಯದರ್ಶಿ ಫಾಝಿಲ್ ಆದಿ ಉಡುಪಿ, ಕಾಪು ತಾಲೂಕು ಅಧ್ಯಕ್ಷ ಆಶ್ರಫ್ ಪಡುಬಿದ್ರಿ, ಅರ್ಫಾತ್ ಬೆಳ್ವೆ, ಅಬ್ದುಲ್ ಖಾದರ್ ಮೂಡು ಗೋಪಾಡಿ, ಪೀರ್ ಮುಹಮ್ಮದ್ ಉಡುಪಿ, ಇಮ್ರಾನ್ ಹೆನ್ನಾಬೈಲ್, ಶಾಬಾನ್ ಹಂಗಳೂರ್, ನಿಹಾರ್ ಅಹ್ಮದ್, ಫಝಲ್ ಅಹ್ಮದ್ ಕಂಡ್ಲೂರ್, ಅಬೂಬಕ್ಕರ್ ಮಾವಿನಕಟ್ಟೆ, ಮುಹಮ್ಮದ್ ಪಿ.ಗುಲ್ವಾಡಿ, ಉಸ್ಮಾನ್ ಪಳ್ಳಿ, ಜಮಾಲ್ ಗುಲ್ವಾಡಿ, ಅನ್ವರ್ ಕಂಡ್ಲೂರ್, ಮುಜಾಹಿದ್ ಗಂಗೊಳ್ಳಿ, ಇರ್ಫಾನ್ ಕಾಪು, ಹಮೀದ್ ಯೂಸುಫ್, ರಜ್ಜಾಕ್ ಹುಸೇನ್, ಮುಸ್ತಾಕ್ ಹೆನ್ನಾಬೈಲ್, ಅನ್ಸಾರ್ ಹೊಸಂಗಡಿ, ಮುನವರ್ ಅಜೆಕಾರ್, ಆಸೀಫ್ ಅಲ್ಬಾಡಿ. ರಯಾನ್ ಬೆಳ್ವೆ, ನಝಿರ್ ನೇಜಾರ್, ಸಮೀರ್, ಶಿಷಾ ಹುಸೇನ್, ಮುಸ್ತಫಾ ಕಾರ್ಕಳ, ಸಮದ್ ಖಾನ್ ಉಪಸ್ಥಿತರಿದ್ದರು.

ಮೌಲಾನ ಫಝಲ್ ಅಹ್ಮದ್ ಕಂಡ್ಲೂರ್ ಕುರಾನ್ ಪಠಿಸಿದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News