ಅ.16ರಂದು ಕೊಣಾಜೆ, ಬೆಳ್ಮನಲ್ಲಿ ವಿದ್ಯುತ್ ನಿಲುಗಡೆ

Update: 2024-10-15 13:45 GMT

ಮಂಗಳೂರು, ಅ. 15: ಉಳ್ಳಾಲ ಎಕ್ಸ್‌ಪ್ರೆಸ್ ಮತ್ತು ಬೆಳ್ಮ ಫೀಡರ್‌ಗಳ ವ್ಯಾಪ್ತಿಯಲ್ಲಿ ಅ.16 ರಂದು ವಿದ್ಯುತ್ ನಿಲುಗಡೆಯಾಗಲಿದೆ.

ಕೊಣಾಜೆ 110/33/11ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಉಳ್ಳಾಲ ಎಕ್ಸ್‌ಪ್ರೆಸ್ ಮತ್ತು 11ಕೆವಿ ಬೆಳ್ಮ ಫೀಡರ್‌ನಲ್ಲಿ ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ದೇರಳಕಟ್ಟೆ, ಕಣಚೂರು, ವಿದ್ಯಾರತ್ನ, ಬದ್ಯಾರ್, ಬೆಳ್ಮ, ರೆಂಜಾಡಿ, ಬಡಕಬೈಲು, ಕಾನಕೆರೆ, ನಿಟ್ಟೆ ಆಸ್ಪತ್ರೆಯ ಹತ್ತಿರ, ಯೆನಪೊಯ ಆಸ್ಪತ್ರೆ ಬಳಿ, ಬಗಂಬಿಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News