ಕಾಶಿಪಟ್ಣ ದಾರುನ್ನೂರು ವಾರ್ಷಿಕ ಹಾಗೂ ಸನದು ಪ್ರದಾನ ಕಾರ್ಯಕ್ರಮ

Update: 2024-10-15 12:41 GMT

ಉಪ್ಪಿನಂಗಡಿ; ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣದಲ್ಲಿ ಕಾರ್ಯಾಚರಿಸುತ್ತಿರುವ ಶಿಕ್ಷಣ ಕೇಂದ್ರ `ದಾರುನ್ನೂರು ಎಜುಕೇಶನ್ ಸೆಂಟರ್' ಸ್ಥಾಪನೆಗೊಂಡು ಹತ್ತು ವರ್ಷ ಪೂರ್ಣಗೊಂಡ ಪ್ರಯುಕ್ತ ಹಾಗೂ ಪ್ರಥಮ ಸನದು ಪ್ರಧಾನ ಕಾರ್ಯಕ್ರಮದ ಹಿನ್ನಲೆಯಲ್ಲಿ ನ.1ರಿಂದ 3 ತನಕ ಹಮ್ಮಿಕೊಳ್ಳಲಾಗಿರುವ ವೈವಿಧ್ಯಮಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಆಗಮಿಸಿದ ಪ್ರಚಾರ ಜಾಥವನ್ನು ಉಪ್ಪಿನಂಗಡಿಯಲ್ಲಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಖತೀಬ್ ಅಬ್ದುಲ್ ಸಲಾಂ ಪೈಝಿ, ಉಸ್ತಾದ್ ಎಸ್ ಬಿ ದಾರಿಮಿ,ಕರಾವಳಿ ಹಮೀದ್ ಮಾತನಾಡಿದರು.

ಎಚ್ ಯೂಸುಪ್ ,ಸಿದ್ದೀಖ್ ಮೇದರ ಬೆಟ್ಟು,ಯೂನಿಕ್ ರಹ್ಮಾನ್,ಹಾಜಿ ಇಬ್ರಾಹಿಂ ಅಗ್ನಾಡಿ ,ಇಸ್ಮಾಯಿಲ್ ತಂಙಳ್, ಶುಕೂರು ಮೈನಾ,ಕೂಟೇಲು ಮುಹಮ್ಮದ್,ಹಸೈನಾರ್ ಹಾಜಿ ಕೊಯಿಲ,ಆಶ್ರಫ್ ಹಾಜಿ ಪೆದ್ಮಲೆ,ಹಸೈನಾರಾಜಿ ಬಂಡಾಡಿ,ಮುಹೀನುದ್ದಿನ್ ಹುದವಿ,ಮುನೀರ್ ಎನ್ಮಾಡಿ ಮೊದಲಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News