ಮೆಸ್ಕಾಂ ಸಿಬ್ಬಂದಿಯ ಕುಟುಂಬಕ್ಕೆ 60 ಲಕ್ಷ ರೂ. ವಿಮಾ ಮೊತ್ತ ಪಾವತಿಸಿದ ಕೆನರಾ ಬ್ಯಾಂಕ್

Update: 2024-08-28 12:40 GMT

ಮಂಗಳೂರು: ಮಂಗಳೂರು ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ಮೆಸ್ಕಾಂ ಸಿಬ್ಬಂದಿ ಕೊಪ್ಪದ ನಿವಾಸಿ ಮಹಾದೇವಪ್ಪ ಅವರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಆಕಸ್ಮಿಕ ವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ವಾರೀಸುದಾರರಾದ ಅವರ ತಂದೆ (ನಾಮಿನಿ) ಟಿ.ಪಿ.ಸೋಮಶೇಖರ್ ಅವರಿಗೆ ಕೆನರಾ ಬ್ಯಾಂಕ್ ಅಪಘಾತ ವಿಮಾ ಯೋಜನೆಯ ಪ್ರಕಾರ 60 ಲಕ್ಷ ರೂ. ಕೆನರಾಬ್ಯಾಂಕ್ ನ ಮಂಗಳೂರು ವೃತ್ತ ಕಚೇರಿಯ ಮಹಾ ಪ್ರಬಂಧಕರಾದ ಸುಧಾಕರ ಕೊಠಾರಿ  ಬುಧವಾರ ಹಸ್ತಾಂತರ ಮಾಡಿದರು.

ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಮೆಸ್ಕಾಂ ಸಿಬ್ಬಂದಿಯವರು ಕರ್ತವ್ಯದಲ್ಲಿರುವಾಗ ಮೃತ ಪಟ್ಟರೆ ಅವರ ವಾರೀಸುದಾರರಿಗೆ ಈ ವಿಮಾ ಯೋಜನೆಯ ಪ್ರಕಾರ 60 ಲಕ್ಷ ರೂ ಮೊತ್ತ ಪಾವತಿಸಲಾಗಿದೆ ಎಂದು ಬ್ಯಾಂಕ್ ನ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News