ಅಮಲು ಪದಾರ್ಥ ಸೇವನೆ ಆರೋಪ: ಮೂವರ ಬಂಧನ

Update: 2024-09-11 14:35 GMT

ಮಂಗಳೂರು, ಸೆ.11: ನಗರದಲ್ಲಿ ಅಮಲು ಪದಾರ್ಥ ಸೇವನೆ ಮಾಡಿದ ಆರೋಪದ ಮೇರಗೆ ಮೂವರನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸೆ.9ರಂದು ನಗರದ ಬಲ್ಮಠದಲ್ಲಿ ಅಮಲು ವಸ್ತುವನ್ನು ಸೇವಿಸಿ ನಶೆಯಲ್ಲಿದ್ದ ಕರೋಪಾಡಿ ಗ್ರಾಮದ ಜಾರ್ಜ್ ಸಾಜು (20) ಮತ್ತು ಕೇರಳ ಕಣ್ಣೂರಿನ ಶಮಾಸ್ (20) ಹಾಗೂ ಸೆ.10ರಂದು ನಗರದ ಜ್ಯೋತಿ ಬಳಿ ಕೊಟ್ಟಾಯಂ ನಿವಾಸಿ ಥೋಮಸ್ ಮ್ಯಾಥ್ಯೂ (19) ಎಂಬವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News