ಮಾದಕ ದ್ರವ್ಯ ಸೇವನೆ ಆರೋಪ: ಐವರ ಸೆರೆ

Update: 2024-08-14 17:02 GMT

ಮಂಗಳೂರು,ಆ.14: ಮಂಗಳೂರು ಗ್ರಾಮಾಂತರ, ಕಾವೂರು, ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯ ವೇಳೆ ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇರೆಗೆ ಐವರನ್ನು ಬಂಧಿಸಲಾಗಿದೆ.

ಆ.13ರಂದು ಮಧ್ಯಾಹ್ನ 2ಕ್ಕೆ ಅರ್ಕುಳ ಗ್ರಾಮದ ವಳಚ್ಚಿಲ್ ಪದವು ಎಂಬಲ್ಲಿ ಅಮಿರುದ್ದೀನ್ (26), ಅಪರಾಹ್ನ 3ಕ್ಕೆ ಅಡ್ಯಾರ್ ಗ್ರಾಮದ ಅಡ್ಯಾರ್ ಪದವಿನಲ್ಲಿ  ಜಿಯಾದ್ (25),  ಮನ್ಸೂರ್ (25) ಎಂಬವರನ್ನು ಬಂಧಿಸಲಾಗಿದೆ.

ಆ.13ರಂದು ಕಾವೂರು ಠಾಣಾ ವ್ಯಾಪ್ತಿಯ ಕೊಂಚಾಡಿಯಲ್ಲಿ ಮೂಡುಶೆಡ್ಡೆಯ ದಿವಿತ್ ಡಿ. ಶೆಟ್ಟಿ (18) ಮತ್ತು ಪಾಂಡೇಶ್ವರ ಠಾಣಾ ವ್ಯಾಪ್ತಿಯ ಪಾಂಡೇಶ್ವರ ಕಟ್ಟೆ ಬಳಿ ಮೂಲತಃ ಚಾಮರಾಜನಗರದ ಪ್ರಸಕ್ತ ಪಾಂಡೇಶ್ವರದಲ್ಲಿ ವಾಸವಾಗಿರುವ ನಾಗಶ್ರೇಯಾಸ್ (23) ಎಂಬವರನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News