ಡಾ. ಜೇಷಾ ರಿಮಿನ್ ಪ್ರಥಮ ಪುಣ್ಯಸ್ಮರಣೆ : ರಕ್ತದಾನ ಶಿಬಿರ

Update: 2023-09-11 16:17 GMT

ಮಂಗಳೂರು , ಸೆ.11: ಕಳೆದ ವರ್ಷ ಪುಣೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂಲತ: ಮಂಗಳೂರು ನಿವಾಸಿ ಡಾ.ಜೇಷಾ ರಿಮಿನ್ ರವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ರಕ್ತದಾನ ಶಿಬಿರ ಸೋಮವಾರ ಮಂಗಳೂರು ಕೊಂಕಣ ರೈಲ್ವೆ ಕಚೇರಿಯಲ್ಲಿ ಅಯೋಜಿಸಲಾಗಿತ್ತು.

ಶಿಬಿರವನ್ನು ಡಾ.ಜೇಷಾ ರಿಮಿನ್ ರವರ ಪೋಷಕರಾದ ಜೋನ್ ಥೋಮಸ್ ಹಾಗೂ ಜೇಷು ಜಾನ್ ಇವರು ಅಯೋಜಿಸಿದ್ದರು.

ಶಿಬಿರದಲ್ಲಿ 60ಕ್ಕೂ ಹೆಚ್ಚು ದಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು. ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪಲಕ್ ,ಹಾಗೂ ಉಸ್ತುವಾರಿಗಳಾದ ಆಂಟೋನಿ ಡಿಸೋಜ ಮತ್ತು ಅಶೋಕ್ ರವರ ನೇತ್ರತ್ವದಲ್ಲಿ ನಡೆದ ಈ ಶಿಬಿರದಲ್ಲಿ. ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು. ಶಿಬಿರ ಸಂಘಟನೆಯ ಪ್ರಮುಖರಾದ ರಿಮಿನ್, ಭರತ್, ಬಿನಿಲ್ ಹಾಗೂ ಮ್ಯಾಥ್ಯೂಸ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News