ಪಕ್ಕಲಡ್ಕ ಯುವಕ ಮಂಡಲದಿಂದ ಉಚಿತ ಕನ್ನಡಕ ವಿತರಣೆ

Update: 2023-08-27 14:24 GMT

ಮಂಗಳೂರು, ಆ.27: ಪಕ್ಕಲಡ್ಕ ಯುವಕ ಮಂಡಲ (ರಿ), ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ, ಪ್ರಸಾದ್ ನೇತ್ರಾಲಯ ಇದರ ಸಹಭಾಗಿತ್ವದಲ್ಲಿ ಕಣ್ಣಿನ ದೋಷವಿರುವ ಅರ್ಹ ಫಲಾನುಭವಿಗಳಿಗೆ ಪಕ್ಕಲಡ್ಕ ಭಗತ್ ಸಿಂಗ್ ಭವನದಲ್ಲಿ ರವಿವಾರ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.

ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಇದರ ಅಧ್ಯಕ್ಷೆ ಚಂದ್ರಕಲಾ ಡಿ. ರಾವ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಇದರ ಕಾರ್ಯದರ್ಶಿ ಸುಮತಿ ದೇವದಾಸ್, ಪಕ್ಕಲಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ಬಿ. ನಾಗೇಶ್ ಶೆಟ್ಟಿ ಉಪಸ್ಥಿತರಿದ್ದರು.

ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷ ದೀಪಕ್ ಬಜಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಯುವಕ ಮಂಡಲದ ಪದಾಧಿಕಾರಿಗಳಾದ ದೀರಾಜ್ ಬಜಾಲ್, ಜಗದೀಶ್ ಬಜಾಲ್, ದೀಕ್ಷಿತ್ ಭಂಡಾರಿ, ಅಶೋಕ ಎನೆಲ್ಮಾರ್, ವರಪ್ರಸಾದ್ ಬಜಾಲ್, ಪ್ರಶಾಂತ್ ಕುಡ್ತಡ್ಕ, ಅಖಿಲೇಶ್ ಬಜಾಲ್, ನವೀನ್ ನಾಯಕ್ ವಹಿಸಿದ್ದರು.

ಪಕ್ಕಲಡ್ಕ ಯುವಕ ಮಂಡಲದ ಜೊತೆ ಕಾರ್ಯದರ್ಶಿ ನಾಗರಾಜ್ ಬಜಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೀತೇಶ್ ತಲವಾರು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News