ಮಂಗಳೂರು: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2023-09-05 17:03 GMT

ರಾಜೇಶ್

ಮಂಗಳೂರು : ಹದಿನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸರು ಬಂಧಿಸಿದ್ದಾರೆ.

ನ್ಯೂ ಚಿತ್ರ ಟಾಕೀಸ್ ಬಳಿಯ ಸುಬ್ಬಯ್ಯ ಶೆಟ್ಟಿ ಕಾಂಪೌಂಡ್‌ನ ರಾಜೇಶ್ (52) ಬಂಧಿತ ಆರೋಪಿ.

ಈತನ ವಿರುದ್ಧ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅಕ್ರ 193/14 ಕಲಂ 384, 506,511 ಜೊತೆಗೆ 34 ಐಪಿಸಿ ಹಾಗೂ ಎಲ್ ಪಿ ಸಿ ನಂಬರ್ 3/22 ಸಿಸಿ 174/16 ಕಲಂ 174 -ಎ) ದಾಖಲಾಗಿತ್ತು.

ಆರೋಪಿಯನ್ನು ಕಾಸರಗೋಡಿನಲ್ಲಿ ಎಎಸ್‌ಐ ಓಂ ದಾಸ್ ಹಾಗೂ ಎಚ್ ಸಿ ಮಚ್ಚೆಂದ್ರನಾಥ್ ರವರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ 14 ದಿನಗಳ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News