ಮಂಗಳೂರು: ಮಾದಕ ವಸ್ತು ಸೇವನೆ ಆರೋಪ; ಇಬ್ಬರ ಬಂಧನ

Update: 2023-08-29 14:35 GMT

ಮಂಗಳೂರು, ಆ.29: ನಗರದ ಕೊಡಿಯಾಲ್‌ಬೈಲ್ ಮತ್ತು ಕಸಬಬೆಂಗರೆಯ ಬಳಿ ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಕಾರ್‌ಸ್ಟ್ರೀಟ್ ಟಿ.ಸಿ. ರೋಡ್ ನಿವಾಸಿ ಪ್ರೀತಮ್ ಶೆಟ್ಟಿ ಮತ್ತು ಕುದ್ರೋಳಿ ಅಳಕೆಯ ಸಲ್ಮಾನ್ ಬಂಧಿತ ಆರೋಪಿಗಳು.

ಆ.28ರಂದು ಪೂ.11:30ಕ್ಕೆ ಕಸಬಾ ಬೆಂಗರೆಯ ಸೂಪರ್ ಸ್ಟಾರ್ ಮೈದಾನದ ಬಳಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಸಲ್ಮಾನ್‌ನನ್ನು ಪಣಂಬೂರು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರಗಿಸಿದ್ದಾರೆ.

ಆ.29ರಂದು ಮಧ್ಯಾಹ್ನ 1:30ಕ್ಕೆ ನಗರದ ಕೊಡಿಯಲ್‌ಬೈಲ್ ಬಳಿ ಪ್ರೀತಮ್ ಶೆಟ್ಟಿ ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಬರ್ಕೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News