ಮಂಗಳೂರು: ಎರಡು ಬೈಕ್‌ಗಳ ಕಳವು

Update: 2023-08-07 15:27 GMT

ಮಂಗಳೂರು, ಆ.7: ನಗರದ ಪ್ರತ್ಯೇಕ ಸ್ಥಳಗಳಲ್ಲಿ ಪಾರ್ಕ್ ಮಾಡಲಾಗಿದ್ದ ಎರಡು ಬೈಕ್‌ಗಳನ್ನು ಕಳವು ಮಾಡಲಾದ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

*ರಾಹುಲ್ ಎಂಬವರು ತಾನು ಕೆಲಸ ಮಾಡುವ ಕಂಪನಿಯ ಬೈಕನ್ನು ಜು.29ರಂದು ಸಂಜೆ 6ಕ್ಕೆ ಕಂಪನಿಯ ಕಟ್ಟಡದ ಬಳಿ ಪಾರ್ಕ್ ಮಾಡಿದ್ದರು. ಜು.31ರಂದು ಬೆಳಗ್ಗೆ ರಾಹುಲ್, ನಿಖಿಲ್ ಹಾಗೂ ದಿಲೀಪ್ ಕೆಲಸಕ್ಕೆಂದು ಆಫೀಸಿಗೆ ಬಂದಾಗ ಬೈಕ್ ಕಳವಾಗಿತ್ತು.ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

*ಪ್ರಶಾಂತ್ ಕುಮಾರ್ ಎಂಬವರು ಆ.4ರಂದು ಕೆಲಸ ಮುಗಿಸಿ ಬಾಡಿಗೆ ಮನೆಯ ಎದುರು ಇರುವ ಗೋರಿಗುಡ್ಡೆ ಎ.ಜೆ ಇಂಜಿನಿಯರಿಂಗ್ ವರ್ಕ್ಸ್ ಕಟ್ಟಡದ ಮುಂದೆ ಪಾರ್ಕ್ ಮಾಡಿ ಕೆಲಸದ ನಿಮಿತ್ತ ಮೂಡುಬಿದಿರೆಗೆ ಹೋಗಿದ್ದರು. ಆ.6ರಂದು ಬಾಡಿಗೆ ಮನೆಯ ಮಾಲಕರು ಕರೆಮಾಡಿ ಬೈಕ್ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಅದರಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News