ಮಂಗಳೂರು: ಟಿಡಿಎಫ್‌ನ ಚಿನ್ನ, ವಜ್ರಾಭರಣಗಳ ಪ್ರದರ್ಶನಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನ

Update: 2023-09-09 14:17 GMT

ಮಂಗಳೂರು: ನಗರದ ಅವತಾರ್ ಹೋಟೆಲ್ ಆ್ಯಂಡ್ ಕನ್ವೆನ್ಶನ್‌ನಲ್ಲಿ ಸೆ.8ರಿಂದ ಎರಡು ದಿನಗಳ ಕಾಲ ಆಯೋಜಿಸ ಲಾಗಿರುವ ಟಿಡಿಎಫ್-ದಿ ಡೈಮಂಡ್ ಫ್ಯಾಕ್ಟರಿಯ ಚಿನ್ನ,ವಜ್ರ ಮತ್ತು ಅನ್‌ಕಟ್ ಆಭರಣಗಳ ಪ್ರದರ್ಶನಕ್ಕೆ ಮೊದಲ ದಿನವೇ ಜನರು ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ.

ಭಾರತೀಯ ರಿಟೇಲ್ ಜ್ಯುವೆಲ್ಲರಿ ಬ್ರಾಂಡ್ ತಯಾರಿಕೆ ವೆಚ್ಚದಲ್ಲಿ ಶೇ.100ರವರೆಗೆ ವಿನಾಯಿತಿಯನ್ನೂ ಘೋಷಿಸಿದೆ. ಪ್ರದರ್ಶನವು ಟಿಡಿಎಫ್ ಅನುಭವವನ್ನು ತಮ್ಮದಾಗಿಸಿಕೊಳ್ಳಲು ಕಾತರಿಸುತ್ತಿರುವ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿದೆ ಎಂದು ಟಿಡಿಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯಾ ಕ್ಲಿನಿಕ್‌ನ ಸ್ಥಾಪಕಿ ಡಾ.ಪ್ರಿಯಾ ಬಲ್ಲಾಳ್ ಮತ್ತು ಕದ್ರಿ ಶಿವಬಾಗ್‌ನ ದಿ ಡೆಂಟಲ್ ಸ್ಪೆಷಲಿಸ್ಟ್ಸ್ ಕ್ಲಿನಿಕ್‌ನ ಡಾ.ಸುಮಿತಾ ನಾಯ್ಕಿ ಅವರು ಸಾಂಪ್ರದಾಯಿಕ ದೀಪವನ್ನು ಬೆಳಗಿಸುವ ಮೂಲಕ ಪ್ರದರ್ಶನವನ್ನು ಉದ್ಘಾಟಿಸಿದರು.

ಟಿಡಿಎಫ್ ಪ್ರದರ್ಶನದಲ್ಲಿ ಚಿನ್ನ,ವಜ್ರ ಮತ್ತು ಅನ್‌ಕಟ್ ಆಭರಣಗಳ ಇತ್ತೀಚಿನ ವಿನ್ಯಾಸಗಳನ್ನು ಅನಾವರಣಗೊಳಿಸಿದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ಶೈಲಿಗಳ ಮಿಶ್ರಣ ಗ್ರಾಹಕರನ್ನು ಮಂತ್ರಮುಗ್ಧಗೊಳಿಸುತ್ತಿದೆ.

ಪ್ರದರ್ಶನದಲ್ಲಿ ಟಿಡಿಎಫ್‌ನ ನ್ಯೂ ಸೀಸನ್ ಕಲೆಕ್ಷನ್‌ಗೂ ಚಾಲನೆ ನೀಡಲಾಗಿದ್ದು,ಸೂಕ್ಷ್ಮ ಕುಸುರಿ ಕೆಲಸದ ನೆಕ್‌ಲೇಸ್‌ಗಳು ಮತ್ತು ಅಂದದ ರಿಂಗ್‌ಗಳು ಕಣ್ಮನವನ್ನು ಸೆಳೆಯುತ್ತಿವೆ. ಪ್ರದರ್ಶನದಲ್ಲಿರುವ ಆಭರಣಗಳಿಗೆ ಗ್ರಾಹಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರದರ್ಶನವು ಸೆ.9ರಂದು ಅಂತ್ಯಗೊಳ್ಳಲಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಇಷ್ಟದ ಆಭರಣಗಳನ್ನು ತಮ್ಮದಾಗಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News