ಮಂಗಳೂರು: ಸಂಶಯದ ಮೇಲೆ ಯುವಕ ಸೆರೆ
Update: 2023-08-02 16:46 GMT
ಮಂಗಳೂರು: ನಗರದ ಕುಲಶೇಖರದ ಕಟ್ಟಡವೊಂದರ ಬಳಿ ಬುಧವಾರ ಮುಂಜಾನೆ ಸಂಶಯಾಸ್ಪದ ರೀತಿಯಲ್ಲಿದ್ದ ಯುವಕನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಮುಂಜಾನೆ ಸುಮಾರು 2.45ರ ವೇಳೆಗೆ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕುಲಶೇಖರದ ಕಿರಣ್ ಎಂಟರ್ಪ್ರೈಸಸ್ ಕಟ್ಟಡದ ಬಳಿ ತನ್ನ ಇರುವಿಕೆಯನ್ನು ಮರೆಮಾಚಿ ಸಂಶಯಾಸ್ಪದ ರೀತಿಯಲ್ಲಿದ್ದ ಯುವಕನನ್ನು ಹಿಡಿದು ವಿಚಾರಿಸಿದಾಗ ಆತ ಮೂಡುಶೆಡ್ಡೆ ಶಿವನಗರದ ದೀಪಕ್ (27) ಎಂಬುದಾಗಿ ತಿಳಿದು ಬಂದಿದೆ.
ತನ್ನ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡದ ಕಾರಣ ಯಾವುದೋ ಕೃತ್ಯ ನಡೆಸಲು ಹೊಂಚು ಹಾಕುತ್ತಿರುವ ಬಗ್ಗೆ ಬಲವಾದ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.