ಮರ್ಕಝ್ ನಾಲೆಡ್ಜ್ ಸಿಟಿ: ಮೀಂ ಕವಿಗೋಷ್ಠಿಗೆ ಸಫ್ವಾನ್ ಅಳಕೆ ಆಯ್ಕೆ

Update: 2024-09-25 09:07 GMT

ಮಂಗಳೂರು: ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ಸಪ್ಟೆಂಬರ್ 28,29 ರಂದು ನಡೆಯಲಿರುವ 'ಮೀಂ ಕವಿಗೋಷ್ಟಿ' ಗೆ ಕರ್ನಾಟಕದ ಯುವ ಬರಹಗಾರ, ಕವಿ ಸಫ್ವಾನ್ ಸಅದಿ ಅಳಕೆ ಆಯ್ಕೆಯಾಗಿದ್ದಾರೆ.

ಪೈಗಂಬರ್ ಮುಹಮ್ಮದರ ಜನ್ಮದಿನದ ಅಂಗವಾಗಿ ವರ್ಷಂಪ್ರತಿ ನಾಲೆಡ್ಜ್ ಸಿಟಿಯಲ್ಲಿ ನಡೆಯುವ ಈ ಕವಿಗೋಷ್ಟಿಯಲ್ಲಿ ದೇಶದ ನಾನಾ ಭಾಗಗಳಿಂದ ಕವಿಗಳು ಭಾಗವಹಿಸುತ್ತಿದ್ದು ಬಹುಭಾಷಾ ಕವಿಗೋಷ್ಟಿ ಜರಗುತ್ತದೆ. ಈ ಕವಿಗೋಷ್ಟಿಗೆ ಸಫ್ವಾನ್ ರವರ 'ಪ್ರವಾದಿಯ ಮಾದರಿ ಬದುಕು' ಎಂಬ ಕವನ ಆಯ್ಕೆಯಾಗಿದ್ದು ಅವರು ಕವನ ವಾಚಿಸಲಿದ್ದಾರೆ.

ಪೇರಮೊಗರು ಮುದರ್ರಿಸ್ ಶರಫುದ್ದೀನ್ ಸಅದಿಯ ಶಿಷ್ಯರಾದ ಸಫ್ವಾನ್, ಈ ಹಿಂದೆ ಹಲವಾರು ಕವಿಗೋಷ್ಟಿಯಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಸ್ತುತ ಕುಪ್ಪೆಪದವು ಮದೀನತುಲ್‌ ಉಲೂಂ ಮದ್ರಸಾ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News