CPIM ಮುಡಿಪು ವಿಭಾಗ ಶಾಖಾ ಕಾರ್ಯದರ್ಶಿಯಾಗಿ ರಝಾಕ್ ಮೊಂಟೆಪದವು ಆಯ್ಕೆ

Update: 2024-09-24 17:43 GMT

ಮಂಗಳೂರು: ಸಿಪಿಐಎಂ ಮುಡಿಪು ಶಾಖಾ ಸಮ್ಮೇಳನವು ಸೆ.23 ರಂದು ಪಕ್ಷದ ಮುಡಿಪು ಕಚೇರಿಯಲ್ಲಿ ನಡೆಯಿತು. ರಝಾಕ್ ಮುಡಿಪು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಮ್ರೆಡ್ ಸುಕುಮಾರ್ ತೊಕ್ಕೊಟ್ಟು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ಭಾರತವು ಪ್ರಸಕ್ತ ಸನ್ನಿವೇಶದಲ್ಲಿ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ವಿವರಿಸಿದರು. ಸಿಪಿಐಎಂ ಅಖಿಲ ಭಾರತ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರಿಗೆ ಕಾರ್ಯಕ್ರಮದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಸಮ್ಮೇಳನದಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಮುಡಿಪು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನಿವೇಶನರಹಿತರನ್ನು ಒಟ್ಟುಗೂಡಿಸಿ ಹೋರಾಟ ಮಾಡುವುದಾಗಿ ನಿರ್ಣಯ ಮಾಡಲಾಯಿತು. ಮಂಗಳೂರು ವಿವಿ ಘಟಕ ಪದವಿ ಕಾಲೇಜುಗಳನ್ನು ಉಳಿಸಲು ಹೋರಾಟವನ್ನು ತೀವ್ರಗೊಳಿಸಲು ನಿರ್ಣಯಿಸಲಾಯಿತು. ಮುಡಿಪು ವಿಭಾಗ ಶಾಖೆಯ ನೂತನ ಕಾರ್ಯದರ್ಶಿಯಾಗಿ ರಝಾಕ್ ಮೊಂಟೆಪದವು ಆಯ್ಕೆಯಾದರು. ಈ ಸಂದರ್ಭ ಮುಡಿಪು ವಲಯ ಸಮಿತಿ ಸದಸ್ಯರಾದ ರಫೀಕ್ ಹರೇಕಳ, ರಿಝ್ವಾನ್ ಹರೇಕಳ, ಹರೇಕಳ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್ ಹರೇಕಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News