ಅರುಣ್ ಉಳ್ಳಾಲ್‌ರ ಭಾಷಣಕ್ಕೆ ಸಿಪಿಐ ಖಂಡನೆ

Update: 2024-10-06 16:21 GMT

 ಅರುಣ್ ಉಳ್ಳಾಲ್‌

ಮಂಗಳೂರು: ಕಿನ್ಯಾದಲ್ಲಿ ಡಾ. ಅರುಣ್ ಉಳ್ಳಾಲ್‌ರ ಮಾತುಗಳು ಜನಾಂಗ ದ್ವೇಷ ಹಾಗೂ ಅಲ್ಪಸಂಖ್ಯಾತ ಸಂಸ್ಥೆಗಳ ವಿರುದ್ಧವಾಗಿದೆ. ಇದರಿಂದ ಕೋಮು ದ್ವೇಷ ಪ್ರಚೋದನೆಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿವೆ. ಉನ್ನತ ಶಿಕ್ಷಣ ಪಡೆದ ಡಾಕ್ಷರೇಟ್ ಪಡೆದಿರುವ ಹಾಗೂ ಸಹ ಪ್ರಾಧ್ಯಾಪಕ ಅರುಣ್‌ರ ನಡೆ ಖಂಡನೀಯ ಎಂದು ಸಿಪಿಐ ದ.ಕ.ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಿ. ಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಶಾಲೆ, ಕಾಲೇಜುಗಳಲ್ಲಿ ಕಲಿತು, ಅಲ್ಲೇ ಪ್ರಾಧ್ಯಾಪಕ ವೃತ್ತಿ ಮಾಡುತ್ತಿರುವ ಈ ವ್ಯಕ್ತಿ ಕೃತಜ್ಞರಾಗುವ ಬದಲು ಕಿಡಿಕಾರುವ ನಡತೆ ಪ್ರದರ್ಶಿಸಿರುವುದು ಅಕ್ಷಮ್ಯ. ತಕ್ಷಣ ಅರುಣ್ ಉಳ್ಳಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. ಅವರಿಗೆ ಕೊಡಮಾಡಿದ ಪ್ರಶಸ್ತಿಗಳನ್ನು ಹಿಂಪಡೆಯಬೇಕೆಂದೂ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News