ಡಾ.ಅರುಣ್ ಉಳ್ಳಾಲ್ಗೆ ತುಳು ಅಕಾಡಮಿಯ ಪ್ರಶಸ್ತಿ: ಮಾಹಿತಿ ಬಹಿರಂಗಕ್ಕೆ ಸಮುದಾಯ ಮಂಗಳೂರು ಒತ್ತಾಯ
ಮಂಗಳೂರು: ದ್ವೇಷ ಭಾಷಣಗೈದ ಆರೋಪ ಎದುರಿಸುತ್ತಿರುವ ಡಾ.ಅರುಣ್ ಉಳ್ಳಾಲ್ಗೆ ನೀಡಲಾದ ತುಳು ಸಾಹಿತ್ಯ ಅಕಾಡಮಿಯ ಪ್ರಶಸ್ತಿಯ ಬಗ್ಗೆ ಮಾಹಿತಿ ಬಹಿರಂಗಪಡಿಸುವಂತೆ ಸಮುದಾಯ ಮಂಗಳೂರು ಒತ್ತಾಯಿಸಿದೆ.
ಈತ ತುಳು ಅಕಾಡಮಿ ಪ್ರಶಸ್ತಿ ವಿಜೇತ ಎಂಬುದಾಗಿ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದೆ. ಅಲ್ಲದೆ ಈ ವ್ಯಕ್ತಿಗೆ ನೀಡಿರುವ ಅಕಾಡಮಿಯ ಪ್ರಶಸ್ತಿಯನ್ನು ವಾಪಸ್ ಪಡೆಯುವಂತೆ ಸಾರ್ವಜನಿಕರ ಹಾಗೂ ಹಿರಿಯ ಲೇಖಕರು, ಶಿಕ್ಷಕರು, ಚಿಂತಕರು ಆಗ್ರಹಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅಕಾಡಮಿಯ ಅಧಿಕೃತ ಪತ್ರಿಕೆ ಱಮದಿಪು’ ಪತ್ರಿಕೆಯನ್ನು ಪರಿಶೀಲಿಸಿ ದಾಗ ಎಲ್ಲಿಯೂ ಅರುಣ್ ಉಳ್ಳಾಲ್ಗೆ ತುಳು ಅಕಾಡಮಿಯ ಪ್ರಶಸ್ತಿ ನೀಡಿರುವ ಬಗ್ಗೆ ಉಲ್ಲೇಖವಿಲ್ಲ. ಆರಂಭ ಕಾಲದಿಂದಲೂ ಇತ್ತೀಚಿನ ತನಕ ಅಕಾಡಮಿಯು ನೀಡಿದ ಪ್ರಶಸ್ತಿಗಳ ವಿವರ ಅಕಾಡಮಿಯ ಱಮದಿಪು’ ಪತ್ರಿಕೆಯಲ್ಲಿದೆ. ಆದರೆ ಅರುಣ್ ಉಳ್ಳಾಲ್ಗೆ ಅಕಾಡಮಿಯ ಪ್ರಶಸ್ತಿಯನ್ನು ನೀಡಿದ್ದರೆ ಯಾವ ಕ್ಷೇತ್ರದ ಸಾಧನೆಗಾಗಿ, ಯಾವ ವರ್ಷದಲ್ಲಿ ಎಂಬುದರ ಬಗ್ಗೆ ಮಾಹಿತಿ ಬಹಿರಂಗಪಡಿಸುವಂತೆ ಸಮುದಾಯ ಮಂಗಳೂರು ಅಧ್ಯಕ್ಷ ದಯಾನಂದ ಶೆಟ್ಟಿ ಒತ್ತಾಯಿಸಿದ್ದಾರೆ.