ಕಂಬಳ ಕೋಣಗಳ ಯಜಮಾನ ಜಗದೀಶ ಆಳ್ವ ನಿಧನ

Update: 2024-10-12 10:46 GMT

ಮಂಗಳೂರು, ಅ.12: ದ.ಕ. ಜಿಲ್ಲೆಯ ಕಂಬಳ ಕ್ಷೇತ್ರದಲ್ಲಿ ಓಟದ ಕೋಣಗಳ ಯಜಮಾನರಾಗಿದ್ದು, ತನ್ನ ಕೋಣಗಳಿಗಾಗಿ ಹಲವು ಜಿಲ್ಲಾ ಪ್ರಶಸ್ತಿ ಗಳಿಸಿರುವ ಪ್ರಗತಿಪರ ಕೃಷಿಕ, ಮೂಲತಃ ಬಡಗಬೆಳ್ಳೂರು ಅತಿಕಾರಿಹಿತ್ಲುವಿನ ಜಗದೀಶ ಆಳ್ವ(63) ಶುಕ್ರವಾರ ಗುರುಪುರ ಕಾರಮೊಗರು ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಮೃತರು ಅಗಲಿದ್ದಾರೆ.

ಗುರುಪುರದ ಮೂಳೂರು-ಅಡ್ಡೂರು ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ನ ಕೋಶಾಧಿಕಾರಿ, ಗುರುಪುರ ಬಂಟರ ಮಾತೃ ಸಂಘದ ಸಕ್ರಿಯ ಸದಸ್ಯ ಹಾಗೂ ಹಿರಿಯ ಕಲಾವಿದರೂ ಆಗಿದ್ದರು. ಮೃತರ ಅಂತ್ಯಕ್ರಿಯೆಯು ಅತಿಕಾರಿಹಿತ್ಲುವಿನಲ್ಲಿ ಶನಿವಾರ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News