ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪವರ್‌ಮ್ಯಾನ್‌ಗಳಿಗೆ ಗೌರವಾರ್ಪಣೆ

Update: 2024-08-20 16:18 GMT

ಉಪ್ಪಿನಂಗಡಿ : ಭಾರತದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ, ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ, ಎಸ್‌ವೈಎಸ್ ಕುಪ್ಪೆಟ್ಟಿ, ಉರುವಾಲು ಪದವು, ತುರ್ಕಳಿಕೆ ಸರ್ಕಲ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ವಿದ್ಯುತ್ ಪವರ್ ಮ್ಯಾನ್ (ಲೈನ್‌ಮಾನ್) ಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು, ತಣ್ಣೀರುಪಂತ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಉರುವಾಲು ಪದವು ಸರ್ಕಲ್ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ಝೈನಿ ನೆರವೇರಿಸಿ ಮಾತನಾಡಿದರು. ಯುವ ವಿದ್ವಾಂಸ ಹುಸೈನ್ ಸಅದಿ ಹೊಸ್ಮಾರು ಮುಖ್ಯ ಸಂದೇಶ ಭಾಷಣವನ್ನು ನೀಡಿದರು.

ಕಲ್ಲೇರಿ ಮೆಸ್ಕಾಂ ಘಟಕದಲ್ಲಿ ಸೇವೆಗೆಯ್ಯವ 16 ಅಧಿಕಾರಿಗಳು, ಲೈನ್’ಮಾನ್ ಗಳಿಗೆ ಗೌರವ ಸಮರ್ಪಣೆ ಹಾಗೂ ಕಳೆದ 30 ವರ್ಷಗಳಿಂದ ಕಲ್ಲೇರಿಯಲ್ಲಿ ಚಿಕಿತ್ಸೆ ನೀಡುತ್ತಾ ಸರ್ವ ಜನರ ಮನಗೆದ್ದ ಡಾ. ಸಂತೋಷ್ ರವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಪವರ್‌ಮೆನ್ ಸಂದೀಪ್ ಹಾಗೂ ಡಾ. ಸಂತೋಷ್ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕೆ.ಎಂ.ಜೆ ಉಪ್ಪಿನಂಗಡಿ ರೆನ್ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಉರುವಾಲು ಪದವು ಸರ್ಕಲ್ ಅಧ್ಯಕ್ಷರಾದ ಕಾಸಿಂ ಪದ್ಮುಂಜ, ಎಸ್‌ವೈಎಸ್ ತುರ್ಕಳಿಕೆ ಅಧ್ಯಕ್ಷ ದಾವುದ್ ಅಶ್ರಫಿ ಬದ್ಯಾರ್, ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಉಜಿರ್ಬೆಟ್ಟು, ತಾಜುದ್ದೀನ್ ಅಳಕೆ, ಕಣಿಯೂರು ಗ್ರಾ. ಪಂ. ಸದಸ್ಯ ಕೃಷ್ಣ ನೀರಾಡಿ, ಉಪ್ಪಿನಂಗಡಿ ರೆನ್ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಸಾಂತ್ವನ ಕಾರ್ಯದರ್ಶಿ ಇಸ್ಮಾಯಿಲ್ ಲತೀಫಿ ಉಜಿರ್ಬೆಟ್ಟು, ಸರ್ಕಲ್ ನಾಯಕ ರಾದ ಅಬ್ದುಲ್ ರಝಾಕ್ ಸಖಾಫಿ ಕುಪ್ಪೆಟ್ಟಿ, ಹನೀಫ್ ಮದನಿ ನೆಕ್ಕಿಲ್, ರಫೀಕ್ ಉಜಿರ್ಬೆಟ್ಟು, ಮುಸ್ತಫಾ ಅಳಕೆ, ಮುಹಮ್ಮದ್ ರಫೀಕ್ ಸಖಾಫಿ ಮುರ, ಇಕ್ಬಾಲ್ ಕೊಲ್ಯ, ಆದಂ ಅಲ್ ಮದೀನಾ ಕುಪ್ಪೆಟ್ಟಿ, ಲತೀಫ್ ಸಖಾಫಿ ತುರ್ಕಳಿಕೆ, ಲತೀಫ್ ಕನ್ಯಾರಕೋಡಿ, ಬಶೀರ್ ಮುಸ್ಲಿಯಾರ್, ಅಬ್ಬಾಸ್, ಇಬ್ರಾಹಿಂ ಸಅದಿ, ಈಜುಗಾರ ಮುಹಮ್ಮದ್ ಬಂದಾರು, ಡಿವಿಶನ್ ಅಧ್ಯಕ್ಷ ಶರೀಫ್ ಸಖಾಫಿ ಉಜಿರ್ಬೆಟ್ಟು, ವಿದ್ಯುತ್ ಗುತ್ತಿಗೆದಾರ ಅಬ್ದುಲ್ ಬಶೀರ್, ಮೊಯ್ದೀನ್, ಕಾಸಿಂ ಸಅದಿ ತುರ್ಕಳಿಕೆ, ಅಝೀಝ್ ಸಅದಿ ಅಗ್ರಹಾರ, ರಝಾಕ್ ನೇರಂಕಿ,ಅಬ್ದುರ‌್ರಹ್ಮಾನ್ ಪದ್ಮುಂಜ, ಇಬ್ರಾಹೀಂ, ರಝಾಕ್ ಕನ್ಯಾರಕೋಡಿ, ಸಿದ್ದೀಕ್ ಅಂಡೆಕೇರಿ ಮೊದಲಾದವರು ಉಪಸ್ಥಿತರಿದ್ದರು.

ಕುಪ್ಪೆಟ್ಟಿ ಸರ್ಕಲ್ ಅಧ್ಯಕ್ಷ ಎನ್.ಎಂ.ಶರೀಫ್ ಸಖಾಫಿ ನೆಕ್ಕಿಲ್ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News