ಉಳ್ಳಾಲ: ಸೀರತ್ ಅಭಿಯಾನಕ್ಕೆ ಚಾಲನೆ

Update: 2023-09-28 11:34 GMT

ಉಳ್ಳಾಲ: ಸಮಾನತೆ ಸಮಾಜದ ಶಿಲ್ಪಿ ಪ್ರವಾದಿ ಮೊಹಮ್ಮದ್ (ಸ.ಅ) ಎಂಬ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾದ್ಯಂತ ಸೆ. 28 ರಿಂದ ಅ. 6 ರ ವರೆಗೆ ಹಮ್ಮಿಕೊಂಡಿರುವ ಸೀರತ್ ಅಭಿಯಾನಕ್ಕೆ ಜಮಾಅತೇ ಇಸ್ಲಾಮಿ ಹಿಂದ್ ಮಂಗಳೂರು ಅಧ್ಯಕ್ಷ ಇಸಾಕ್ ಪುತ್ತೂರು ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು ಪ್ರವಾದಿ ಮುಹಮ್ಮದ್ ಪೈಗಂಬರ್ ರವರು ಜಗತ್ತಿಗೆ ದೇವರನ್ನು ಪರಿಚಯಿಸುವ ಮೂಲಕ ಜನರ ಏಕತೆ, ಸಮಾನತೆ ಮತ್ತು ಘನತೆಯ ಜೀವನ ಶೈಲಿ ಯನ್ನು ಕೃತಿಯ ಮೂಲಕ ಪರಿಣಾಮಕಾರಿ ಯಾಗಿ ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.

ಅಭಿಯಾನದ ಪೋಸ್ಟರ್ ಅನ್ನು ಡೇಲ್ಟಾ ಕೋ ಆಪರೇಷನ್ ಇದರ ವ್ಯವಸ್ಥಾಪಕ ಮುಹಿಯುದ್ದೀನ್ ಬಿಡುಗಡೆ ಮಾಡಿದರು.

ಈ ಕಾರ್ಯಕ್ರಮ ದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲ್ ಗಫೂರ್ ಕುಳಾಯಿ, ಉಳ್ಳಾಲ ಶಾಖೆ ಅಧ್ಯಕ್ಷ ಅಬ್ದುಲ್ ಕರೀಂ, ಹುದಾ ಮಸೀದಿ ಅಧ್ಯಕ್ಷ ಯು.ಎಸ್.ಹಸನಬ್ಬ, ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಅಧ್ಯಕ್ಷ ಡಾ.ಝೈನುದ್ದೀನ್,ಇಸ್ಹಾಕ್ ಮತ್ತಿತರರು ಉಪಸ್ಥಿತರಿದ್ದರು.

ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಕಾರ್ಯ ದರ್ಶಿ ಡಾ.ಮುಬೀನ್ ಕಾರ್ಯಕ್ರಮ ನಡೆಸಿಕೊಟ್ಟರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News