ಸಂಸತ್ ಪ್ರಕರಣದ ಬಳಿಕ ಜೀವ ಬೆದರಿಕೆಗಳು, ದ್ವೇಷ ಸಂದೇಶಗಳು ಬರುತ್ತಿವೆ: ಬಿಎಸ್ಪಿ ಸಂಸದ ದಾನಿಷ್ ಅಲಿ

Update: 2023-09-27 16:53 GMT

ದಾನಿಷ್ ಅಲಿ | Photo: PTI 

ಹೊಸದಿಲ್ಲಿ: ಲೋಕಸಭೆಯಲ್ಲಿ ತನ್ನ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧೂರಿಯವರ ಅವಮಾನಕಾರಿ ಹೇಳಿಕೆಗಳ ಕುರಿತು ವಿವಾದದ ನಡುವೆಯೇ ಬಿಎಸ್ಪಿ ಸಂಸದ ದಾನಿಷ್ ಅಲಿಯವರು, ಕೆಲವರು ತನಗೆ ದ್ವೇಷ ತುಂಬಿದ ಮತ್ತು ಜೀವ ಬೆದರಿಕೆಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಬುಧವಾರ ಹೇಳಿದ್ದಾರೆ. ಈ ಬಗ್ಗೆ ಕ್ರಮವನ್ನು ತೆಗೆದುಕೊಳ್ಳುವಂತೆ ದಿಲ್ಲಿ ಪೋಲಿಸರನ್ನು ಅವರು ಆಗ್ರಹಿಸಿದ್ದಾರೆ.

ಈ ವಿಷಯವನ್ನು ‘X’ನಲ್ಲಿ ಪೋಸ್ಟ್ ಮಾಡಿರುವ ಅಲಿ ಅದನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಸಂದೇಶಗಳ ಸ್ಕ್ರೀನ್ ಶಾಟ್ ಗಳನ್ನೂ ಅವರು X ನಲ್ಲಿ ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News