ಮಹಾರಾಷ್ಟ್ರ| ಎನ್‌ಸಿಪಿ ನಾಯಕ ಸಚಿನ್ ಹತ್ಯೆ

Update: 2024-10-05 15:11 GMT

ಎನ್‌ಸಿಪಿ ನಾಯಕ ಸಚಿನ್ | PC : NDTV  

ಮುಂಬೈ : ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕಾರ್ಯಕರ್ತ ಸಚಿನ್ ಆಲಿಯಾಸ್ ಮುನ್ನಾ ಕುರ್ಮಿ ಅವರನ್ನು ದಕ್ಷಿಣ ಮುಂಬೈಯ ಬೈಕುಲ್ಲಾ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆಗೈಯಲಾಗಿದೆ.

ಮುಂಬೈಯ ಬೈಕುಲ್ಲಾ ಪ್ರದೇಶದ ಎಂಎಚ್‌ಎಡಿಎ ಕಾಲನಿಯ ಹಿಂದೆ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಕುರ್ಮಿಯನ್ನು ಇರಿದು ಹತ್ಯೆಗೈದಿದ್ದಾರೆ ಎಂದು ಪ್ರಾಥಮಿಕ ತನಿಖೆ ತಿಳಿಸಿದೆ.

ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ. ಹತ್ಯೆ ಹಿಂದಿನ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ. ಈ ಹತ್ಯೆ ಪ್ರಕರಣದಲ್ಲಿ ಕನಿಷ್ಠ ಎರಡರಿಂದ ಮೂರು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News