ಸಂಸತ್ತಿನಲ್ಲಿ ನಿಂದನೆಗೊಳಗಾಗಿದ್ದ ಬಿಎಸ್ಪಿ ಸಂಸದ ದಾನಿಶ್ ಅಲಿಯನ್ನು ಪಕ್ಷದಿಂದ ಉಚ್ಚಾಟಿಸಿದ ಮಾಯಾವತಿ
Update: 2023-12-09 11:42 GMT
ಲಕ್ನೋ: ಬಹುಜನ ಸಮಾಜ ಪಕ್ಷವು ಇಂದು ತನ್ನ ಸಂಸದ ದಾನಿಶ್ ಅಲಿ ಅವರನ್ನು “ಪಕ್ಷ-ವಿರೋಧಿ ಚಟುವಟಿಕೆಗಳಲ್ಲಿ” ಶಾಮೀಲಾಗಿರುವುದಕ್ಕೆ ಉಚ್ಚಾಟಿಸಿದೆ. ಅಲಿ ಅವರು ಉತ್ತರ ಪ್ರದೇಶದ ಅಮ್ರೋಹ ಲೋಕಸಭಾ ಕ್ಷೇತ್ರವನ್ನು 2019ರಿಂದ ಪ್ರತಿನಿಧಿಸುತ್ತಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರಿಂದ ತೀವ್ರ ನಿಂದನೆಗೆ ಆಲಿ ಒಳಗಾಗಿದ್ದರು. ನಂತರ ಈ ಕುರಿತಂತೆ ಅಲಿ ಅವರು ಸಂಸತ್ತಿನ ನೈತಿಕ ಸಮಿತಿಗೆ ದೂರಿದ್ದರು.