ಉತ್ತರ ಪ್ರದೇಶ: ದಸರಾ ಉತ್ಸವ ವೀಕ್ಷಿಸುತ್ತಿದ್ದ ವ್ಯಕ್ತಿಗೆ ಢಿಕ್ಕಿ; ಬೈಕ್‌ ಸವಾರನನ್ನು ಥಳಿಸಿ ಹತ್ಯೆಗೈದ ಗುಂಪು

Update: 2023-10-26 12:27 GMT

ಸಾಂದರ್ಭಿಕ ಚಿತ್ರ 

ಹಾಪುರ್: ಉತ್ತರ ಪ್ರದೇಶದ ಹಾಪುರ್‌ದಲ್ಲಿ ವ್ಯಕ್ತಿಯೋರ್ವನ ಹತ್ಯೆ ಆರೋಪದಲ್ಲಿ ಇಬ್ಬರನ್ನು ಪೋಲಿಸರು ಬಂಧಿಸಿದ್ದಾರೆ.

ಮಂಗಳವಾರ ಇರ್ಷಾದ್ ಮುಹಮ್ಮದ್ ಚಲಾಯಿಸುತ್ತಿದ್ದ ಬೈಕ್ ಲುಹಾರಿ ಗ್ರಾಮದ ಸಮೀಪ ದಸರಾ ಉತ್ಸವವನ್ನು ವೀಕ್ಷಿಸುತ್ತಿದ್ದ ಗುಂಪಿನಲ್ಲಿದ್ದ ಓರ್ವ ವ್ಯಕ್ತಿಗೆ ಢಿಕ್ಕಿ ಹೊಡೆದಿತ್ತು. ಇದು ತೀವ್ರ ವಾಗ್ವಾದವನ್ನುಂಟು ಮಾಡಿದ್ದು, ಗುಂಪು ಕಲ್ಲಿನಿಂದ ಇರ್ಷಾದ್ ಮೇಲೆ ಹಲ್ಲೆ ನಡೆಸಿತ್ತು. ಇರ್ಷಾದ್ ರಕ್ಷಣೆಗೆ ಯತ್ನಿಸಿದ್ದ ವಾಸಿಮ್ ಎಂಬಾತನೂ ಗುಂಪಿನ ಹಲ್ಲೆಯಿಂದ ಗಾಯಗೊಂಡಿದ್ದ ಎಂದು ವರದಿಯಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಇರ್ಷಾದ್‌ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಆತ ಕೊನೆಯುಸಿರೆಳೆದಿದ್ದ.

ಇರ್ಷಾದ್ ತಂದೆ ಇಮಾಮುದ್ದೀನ್ ಮುಹಮ್ಮದ್‌ರ ದೂರಿನ ಮೇರೆಗೆ ಪೋಲಿಸರು ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಘಟನೆಯ ಬಳಿಕ ಹಿಂಸಾಚಾರವನ್ನು ತಡೆಯಲು ಗ್ರಾಮದಲ್ಲಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗಾಗಿ ಪೋಲಿಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News