ಮಂಗಳೂರು: ರಥಬೀದಿಯ ಮಹಿಳಾ ಕಾಲೇಜಿನಲ್ಲಿ ಸುಜಾತಾ ಹೆಗ್ಡೆ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ

Update: 2023-08-14 08:47 GMT

ಮಂಗಳೂರು: ನಗರದ ರಥಬೀದಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಕ್ಷಕಿ ದಿವಂಗತ ಶ್ರೀಮತಿ ಸುಜಾತಾ ಹೆಗ್ಡೆ ಸ್ಮರಣಾರ್ಥ ಪ್ರತಿಭಾ ಪುರಸ್ಕಾರವು ಆಗಸ್ಟ್ 15ರಂದು ಬೆಳಗ್ಗೆ 9.30ಕ್ಕೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ.

ಕಾಲೇಜಿನ ಪ್ರೌಢಶಾಲಾ ವಿಭಾಗದ ಐವರು ಹಾಗೂ ಪದವಿಪೂರ್ವ ವಿಭಾಗದ ನಾಲ್ಕು ವಿದ್ಯಾರ್ಥಿಗಳಿಗೆ ತಲಾ   5 ಸಾವಿರ ರೂ. ನಗದು ಪುರಸ್ಕಾರ ನೀಡಲಾಗುವುದು. ಸಮಾಜ ವಿಜ್ಞಾನ ವಿಷಯದಲ್ಲಿ ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗೆ  5 ಸಾವಿರ ರೂ ನಗದು ವಿಶೇಷ ಪುರಸ್ಕಾರ ನೀಡಲಾಗುವುದು. ಸುಜಾತಾ ಹೆಗ್ಡೆ ಅವರ ಪತಿ, ಉದ್ಯಮಿ ಅಶೋಕ್ ಹೆಗ್ಡೆ ಈ ನಗದು ಮೊತ್ತವನ್ನು ಪ್ರಾಯೋಜಿಸಿದ್ದಾರೆ.

76ನೇ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News