ಸುಳ್ಯ: ಕೆಸಿಎಫ್ ಬಹ್ರೈನ್ ರಾಷ್ಟೀಯ ಸಮಿತಿಯ ನಾಯಕ ಬಶೀರ್ ಕಾರ್ಲೆ ನಿಧನ

Update: 2024-09-01 08:07 GMT

ಸುಳ್ಯ: ಕೆಸಿಎಫ್ ಬಹ್ರೈನ್ ರಾಷ್ಟೀಯ ಸಮಿತಿಯ ನಾಯಕ, ಸಕ್ರಿಯ ಸುನ್ನೀ ಕಾರ್ಯಕರ್ತ ಬಶೀರ್ ಕಾರ್ಲೆ (50)   ರವಿವಾರ ಮುಂಜಾನೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸುಳ್ಯ ಗಾಂಧಿನಗರ ನಿವಾಸಿಯಾಗಿದ್ದ ಬಶೀರ್ ಅವರು ಪ್ರಸ್ತುತ ಬೊಳುಬೈಲು ಕುಂಬ್ರಚೊಡು ನಲ್ಲಿ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ ಬ್ರೈನ್ ಟ್ಯೂಮರ್ ಗೆ ಒಳಗಾಗಿ ಕೊಚ್ಚಿ ಆಸ್ಪತ್ರೆ ಯಲ್ಲಿ ಶಸ್ತ್ರ ಕ್ರಿಯೆಗೆ ಒಳಗಾಗಿದ್ದ ಬಶೀರ್ ಅವರು, ಇತ್ತೀಚಿಗೆ ರೋಗ ಉಲ್ಬಣಗೊಂಡು ಕಾಸರಗೋಡು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿದ್ದಾರೆ. 

ಬಶೀರ್ ಅವರು ದಶಕಗಳ ಹಿಂದಿನಿಂದಲೇ ಸುಳ್ಯ ಪ್ರದೇಶದಲ್ಲಿSSF ಕಟ್ಟಿ ಬೆಳೆಸಿ, ನಾಯಕತ್ವ ಕೊಟ್ಟು ಭರವಸೆ ಮೂಡಿಸಿದ್ದರು. ಉದ್ಯೋಗ ನಿಮಿತ್ತ ಬಹರೈನ್ ಗೆ ತೆರಳಿದ್ದ ಬಶೀರ್ ಅವರು  ಪ್ರವಾಸಿ ಜೀವನ ನಡೆಸುವಾಗಲೂ ಸಿಕ್ಕ ಬಿಡುವುಗಳನ್ನು ಬಳಸಿ, KCF, ಸುಳ್ಯಅಸೋಸಿಯೇಷನ್, ಮುಂತಾದ ಊರಿನ ಎಲ್ಲ ಸುನ್ನೀ ಸಂಘ-ಸಂಸ್ಥೆಗಳ ಪೋಷಕ ಸಮಿತಿಗಳಲ್ಲಿ ಮತ್ತು ಸಮಾಜ ಸೇವಾ ಘಟಕಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು. ಕುಂಬ್ರ ಮರ್ಕಝುಲ್ ಹುದಾದ ಬಹರೈನ್ ಘಟಕದ ಸಾರಥಿಯೂ ಆಗಿದ್ದರು.

ಮೃತರು ಪತ್ನಿ, ಒಬ್ಬ ಪುತ್ರ ಇಬ್ಬರು ಪತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News