ಪತ್ರಕರ್ತ ವೆಂಕಟೇಶ್ ಸಂಪ ಅವರಿಗೆ ʼಸ್ವರ್ಣ ಸಿರಿʼ ಪ್ರಶಸ್ತಿ ಪ್ರದಾನ

Update: 2024-06-23 12:25 GMT

ಹುಬ್ಬಳ್ಳಿ : ಪತ್ರಕರ್ತ, ಸಂಪದ ಸಾಲು ಪತ್ರಿಕೆ ಸಂಪಾದಕ ವೆಂಕಟೇಶ್ ಸಂಪ ಅವರಿಗೆ 2024ರ ʼಸ್ವರ್ಣ ಸಿರಿʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೆಂಕಟೇಶ್ ಸಂಪ‌ ಅವರು ಕಳೆದ 17 ವರ್ಷಗಳಿಂದ ಸಂಪದ ಸಾಲು ಪತ್ರಿಕೆ ನಡೆಸುತ್ತಿದ್ದಾರೆ. ಇವರು ಹಲವಾರು ಟಿ ವಿ, ರೇಡಿಯೋ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಸಾವಯವ ಕೃಷಿಯಲ್ಲೂ ತೊಡಗಿರುವ ವೆಂಕಟೇಶ್ ಸಂಪ ಅವರು, ವಿದ್ಯಾರ್ಥಿಗಳಿಗಾಗಿ ಕಲಿಕೆಯ ಜೊತೆ ಗಳಿಕೆ, ರೈತರಿಗಾಗಿ ಪರಿಸರ ಜಾಗೃತಿ, ಸ್ವಾವಲಂಬನೆ,ಹಾಗು ರಕ್ತದಾನ, ಮುಂತಾದ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ.

ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಇವರ ಕತೆ, ಕವನ, ಲೇಖನಗಳು ಪ್ರಕಟವಾಗಿದ್ದು, ಮಾಧ್ಯಮ ಕ್ಷೇತ್ರದ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ಉಮಾಶಂಕರ ಪ್ರತಿಷ್ಠಾನ ಮತ್ತು ಭಾವಸಂಗಮದ ರಾಜಶೇಖರ್ ಪಾಟೀಲ್ ಮತ್ತು ಸಾಹಿತಿಗಳಾದ  ಎಲ್.ಎಸ್.ಶಾಸ್ತ್ರಿ, ಲಲಿತಾ ಬೆಳವಾಡಿ, ಡಾ.ಕೆ.ವಿ.ರಾಜೇಶ್ವರಿ, ಎಸ್.ವಿಜಯಾ, ಮಾಲತಿ ಮುದಕವಿ, ಇತರರು ಹಾಜರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News