ಕಾಸರಗೋಡು: ಸಹೋದರನನ್ನು ಗುಂಡಿಕ್ಕಿ ಹತ್ಯೆ; ಆರೋಪಿಯ ಬಂಧನ

Update: 2024-03-04 09:25 GMT

ಕಾಸರಗೋಡು :  ಅಣ್ಣನೊಬ್ಬ ಸ್ವಂತ ತಮ್ಮನನ್ನೇ ಗುಂಡಿಕ್ಕಿ ಕೊಲೆಗೈದ ಘಟನೆ ಕಾಸರಗೋಡಿನ ಕುತ್ತಿಕೋಲ್ ನಲ್ಲಿ  ಭಾನುವಾರ ರಾತ್ರಿ ನಡೆದಿದೆ.

ಕೊಲೆಗೀಡಾದ ವ್ಯಕ್ತಿಯನ್ನು ಕುತ್ತಿ ಕೋಲ್ ನ ಅಶೋಕನ್ ನಾಯರ್ (45) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧ ಪಟ್ಟಂತೆ ಬಾಲಕೃಷ್ಣ ನಾಯರ್ (50) ನನ್ನು ಬೇಡಡ್ಕ ಪೊಲೀಸರು ಬಂಧಿಸಿದ್ದಾರೆ.

ಪಾನಮತ್ತ ರಾಗಿದ್ದ ಇಬ್ಬರು ಜಗಳ ವಾಡಿದ್ದು, ಈ ಸಂದರ್ಭದಲ್ಲಿ ಅಶೋಕನ್ ನಾಡ ಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಗೈದಿದ್ದಾನೆ. ಗಂಭೀರ ಗಾಯ ಗೊಂಡಿದ್ದ ಅಶೋಕನ್ ನನ್ನು ಜಿಲ್ಲಾಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.

ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News