ಕಾಸರಗೋಡು : ವ್ಯಕ್ತಿ ನಾಪತ್ತೆ

Update: 2024-02-03 16:28 GMT

ಕಾಸರಗೋಡು: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ಧರ್ಮತ್ತಡ್ಕದಲ್ಲಿ ನಡೆದಿದೆ.

ಧರ್ಮತ್ತಡ್ಕದ ಜೋನ್ ಡಿ ಸೋಜ ( 60) ನಾಪತ್ತೆಯಾದವರು. ಇವರ ಮೊಬೈಲ್ ಫೋನ್ ಮತ್ತು ಸ್ಕೂಟರ್ ಉಪ್ಪಳ ನಯಬಜಾರ್ ಬಳಿಯ ಅಂಬಾರ್ ಎಂಬಲ್ಲಿ ತೊರೆದು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೆರ್ಮುದೆ ತೆರಳುವುದಾಗಿ ಗುರುವಾರ ದಂದು ತೆರಳಿದ್ದ ಇವರು ನಾಪತ್ತೆಯಾಗಿರುವು ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ತಡರಾತ್ರಿ ಯಾದರೂ ಮನೆಗೆ ಬರದ ಹಿನ್ನಲೆಯಲ್ಲಿ ಪತ್ನಿ ಮೊಬೈಲ್ ಗೆ ಕರೆ ನೀಡಿದರೂ ಪ್ರತಿಕ್ರಿಯೆ ಲಭಿಸಿದ ಹಿನ್ನಲೆಯಲ್ಲಿ ವಿವಿಧೆಡೆ ಶೋಧ ನಡೆಸಿದ್ದು, ಆದರೆ ನಾಪತ್ತೆ ಯಾದ ಹಿನ್ನಲೆಯಲ್ಲಿ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾ ಗಿತ್ತು. ಪೊಲೀಸರು ತನಿಖೆ ನಡೆಸು ತ್ತಿರುವ ನಡುವೆ ಉಪ್ಪಳ ಆಂಬಾರ್ ನಲ್ಲಿ ಬೈಕ್ ಮತ್ತು ಮೊಬೈಲ್ ಪತ್ತೆಯಾಗಿದೆ.

ಸ್ಕೂಟರ್ ನ ಕೀಲಿ ಕೈ, ಮೊಬೈಲ್ ಫೋನ್ ಮತ್ತು ಸ್ಕೂಟರ್ ರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಮೊಬೈಲ್ ಫೋನ್ ನ ಕರೆಗಳನ್ನು ಪೊಲೀಸರು ಕಲೆ ಹಾಕಿದ್ದು, ಪರಿಶೀಲನೆ ನಡೆಸಲಾಗು ತ್ತಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News