ನಾವು ನಾಲ್ಕನೆ ಬಾರಿ ಅಧಿಕಾರಕ್ಕೆ ಮರಳುವ ಖಾತರಿ ಇಲ್ಲದಿದ್ದರೂ...: ನಿತಿನ್ ಗಡ್ಕರಿ ಹೇಳಿದ್ದೇನು?

Update: 2024-09-23 06:28 GMT

ಕೇಂದ್ರ ಸಚಿವ ನಿತಿನ್ ಗಡ್ಕರಿ (Photo: NDTV)

ನಾಗಪುರ: ವಿವಿಧ ಸರಕಾರಗಳಲ್ಲಿ ಸಚಿವರಾಗುವ ತಮ್ಮ ಸಹೋದ್ಯೋಗಿ ರಾಮದಾಸ್ ಅಠಾವಳೆ ಅವರ ಸಾಮರ್ಥ್ಯದ ಕುರಿತು ರವಿವಾರ ಹಾಸ್ಯ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, “ನಮ್ಮ ಸರಕಾರ ನಾಲ್ಕನೆಯ ಬಾರಿ ಅಧಿಕಾರಕ್ಕೆ ಮರಳುವ ಕುರಿತು ಖಾತರಿ ನೀಡಲು ಸಾಧ್ಯವಿಲ್ಲದಿದ್ದರೂ, ರಾಮದಾಸ್ ಅಠಾವಳೆ ಮುಂದಿನ ಬಾರಿಯೂ ಸಚಿವರಾಗಲಿದ್ದಾರೆ ಎಂಬುದು ನಿಶ್ಚಿತವಾಗಿಯೂ ಖಾತರಿಯಾಗಿದೆ” ಎಂದು ಕಾಲೆಳೆದ ಘಟನೆ ನಾಗಪುರದ ಕಾರ್ಯಕ್ರಮವೊಂದರಲ್ಲಿ ನಡೆದಿದೆ.

ನಾನು ತಮಾಷೆ ಮಾಡುತ್ತಿದ್ದೇನೆ ಎಂದೂ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ನಾಯಕರಾದ ರಾಮದಾಸ್ ಅಠಾವಳೆ ಕಳೆದ ಮೂರು ಅವಧಿಯಿಂದ ಸಚಿವರಾಗಿದ್ದು, ನಾಲ್ಕನೆಯ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಮರಳಿದರೆ ಮತ್ತೆ ಸಚಿವರಾಗಿ ಮುಂದುವರಿಯುವ ಭರವಸೆ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ರಾಮದಾಸ್ ಅಠಾವಳೆ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಪಕ್ಷ 10-12 ಸ್ಥಾನಗಳಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News